ಗರುಡನಉಕ್ಕಡ ಮತ್ತು ಗೌರಿಪುರ ಗ್ರಾಮಗಳ ಮಧ್ಯೆ ಬೆಂಗಳೂರು– ಮೈಸೂರು ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಜೆಸಿಬಿ ಬಳಕೆ, ವಾಹನಗಳ ಓಡಾಟದಿಂದ ವಾರದಲ್ಲಿ ಮೂರು ದಿನ ನೀರಿನ ಕೊಳವೆ ಒಡೆಯುತ್ತಿದೆ. ಎರಡು ವಾರಗಳಿಂದ ಮೇಲಿಂದ ಮೇಲೆ ಈ ಸಮಸ್ಯೆ ಉಂಟಾಗುತ್ತಿದೆ. ಹೆದ್ದಾರಿ ಕಾಮಗಾರಿಯ ಉಪ ಗುತ್ತಿಗೆ ಪಡೆದಿರುವವರು ಕುಡಿಯುವ ನೀರಿನ ಕೊಳವೆ ಒಡೆದರೂ ತತ್ಸಾರದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ, ಪಿಡಿಒ ಆರ್. ಶಿಲ್ಪಾ ಇತರರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.