ಮಧುರೈ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಸಂಸ್ಥಾಪಕ ಅಧ್ಯಕ್ಷರಾಗಿ ಅವರು 25 ವರ್ಷ ಸೇವೆ ಸಲ್ಲಿಸಿದ್ದರು. ಮದ್ರಾಸ್ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದರು. ಸಂದರ್ಶನ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು. ತಮಿಳು–ಕನ್ನಡ ನಿಘಂಟು, ಜ್ಞಾನರಥ, ಪ್ರಸಾದ, ಸಾರೂಪ್ಯ, ವಿಚಾರಣಾ ಕಮೀಷನ್, ಕಾವೇರಿ ಸಾಹಿತ್ಯ, ಚಿತ್ತಾರ ಮುಂತಾದ ಕೃತಿ ರಚಿಸಿದ್ದರು. ತಿರುವಳ್ಳವರ್ನ ‘ತಿರುಕ್ಕುರುಳ್’ ಕೃತಿಯನ್ನು ಕನ್ನಡಕ್ಕೆ ತಂದ ನಂತರ ಅವರು ಕನ್ನಡದ ತಿರುವಳ್ಳವರ್ ಎಂದೇ ಪ್ರಸಿದ್ಧಿ ಪಡೆದಿದ್ದರು.