ಜನಜಾತ್ರೆ: ಮಹಾಲಯ ಅಮಾವಾಸ್ಯೆ ನಿಮಿತ್ತ ಪಟ್ಟಣದ ಆಸುಪಾಸಿನ ನದಿ ತೀರಗಳಲ್ಲಿ ಗುರುವಾರ ಜನ ಜಾತ್ರೆಯೇ ಕಂಡು ಬಂತು. ರಾಜ ಸೋಪಾನಕಟ್ಟೆ, ಜೀಬಿ ಗೇಟ್, ಪಶ್ಚಿಮವಾಹಿನಿ, ಗೋಸಾಯಿಘಾಟ್, ಕಾವೇರಿ ಸಂಗಮ ಬಳಿ ಜನರು ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದರು. ತಿಲ ತರ್ಪಣ ಇತರ ಸಾಂಪ್ರದಾಯಿಕ ಪೂಜೆಗಳನ್ನು ನೆರವೇರಿಸಿದರು.