<p>ಶ್ರೀರಂಗಪಟ್ಟಣ: ‘ತಾಲ್ಲೂಕಿನ ಮಹದೇವಪುರ ಗ್ರಾಮದ ರೈತರು ನಾಲ್ಕೈದು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿನ ಬಳಿ ಇಸ್ಕಾನ್ ಸಂಸ್ಥೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.</p>.<p>ಇಲ್ಲಿನ ಮಿನಿ ವಿಧಾನಸೌಧದ ಎದುರು ಮಹಾತ್ಮ ಗಾಂಧಿ ಮತ್ತು ಅಂಬೇ ಡ್ಕರ್ ಭಾವಚಿತ್ರ ಇಟ್ಟು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಭಟನಾ ಧರಣಿ ನಡೆಸಿದರು. ಇಸ್ಕಾನ್ ವಿರುದ್ಧ ಘೋಷಣೆ ಕೂಗಿದರು.</p>.<p>‘ರೈತರು ಕೃಷಿ ಮಾಡುತ್ತಿರುವ ಜಮೀನಿಗೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ಕೊಂಡಿರುವ ಇಸ್ಕಾನ್ ಸಂಸ್ಥೆ ಗೂಂಡಾಗಳ ಮೂಲಕ ರೈತರಿಗೆ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ನೀಡಬೇಕು’ ಎಂದು ರೈತರು ಮನವಿ ಮಾಡಿದರು.</p>.<p>‘ಮಹದೇವಪುರ ಗ್ರಾಮದ ಸ.ನಂ. 411ರಲ್ಲಿ ಗೋಮಾಳಕ್ಕೆ ಸೇರಿದ ಜಮೀನಿನಲ್ಲಿ 30ಕ್ಕೂ ಹೆಚ್ಚು ರೈತರು 40 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಜಮೀನನ್ನು ದರಖಾಸ್ತು ಮೂಲಕ ತಮ್ಮ ಹೆಸರಿಗೆ ಮಂಜೂರು ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಸ್ಕಾನ್ ಸಂಸ್ಥೆ ರೈತರ ಗಮನಕ್ಕೆ ಬಾರ ದಂತೆ ರೈತರು ಅನುಭವದಲ್ಲಿ ಇರುವ ಜಮೀನಿಗೆ ದಾಖಲೆ ಸೃಷ್ಟಿಸಿಕೊಂಡಿದೆ. ಮೂರು ದಿನಗಳಿಂದ ಈ ಜಮೀನಿಗೆ ತಂತಿ ಬೇಲಿ ಹಾಕುತ್ತಿದ್ದು, ಅದನ್ನು ತಡೆಯ ಬೇಕು’ ಎಂದು ಗಂಗಾ ಮತಸ್ಥರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರತಿಉಕ್ಕಡ ಎಂ.ಚಂದ್ರು ಒತ್ತಾಯಿಸಿದರು.</p>.<p>‘ರೈತರ ಜಮೀನಿಗೆ ಇಸ್ಕಾನ್ ಸಂಸ್ಥೆ ಹಾಕಿರುವ ಬೇಲಿಯನ್ನು ಮೂರು ದಿನಗಳ ಒಳಗಾಗಿ ತೆರವು ಮಾಡಿಸಬೇಕು. ಅನುಭವದ ಆಧಾರದ ಮೇಲೆ ರೈತರ ಹೆಸರಿಗೆ ಸಾಗುವಳಿ ಚೀಟಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ರೈತರು ಎಚ್ಚರಿಸಿದರು.</p>.<p>ಹೆಚ್ಚುವರಿ ತಹಶೀಲ್ದಾರ್ ರೇಖಾ ಅವರಿಗೆ ಮನವಿ ಸಲ್ಲಿಸಿದರು.</p>.<p>ಕಾವೇರಯ್ಯ, ಕಾಳಯ್ಯ, ನಿಂಗಯ್ಯ, ಮುತ್ತುನಾಯಕ್, ಚಿನ್ನಸ್ವಾಮಿ, ಎನ್. ಸ್ವಾಮಿ, ನಂಜುಂಡಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀರಂಗಪಟ್ಟಣ: ‘ತಾಲ್ಲೂಕಿನ ಮಹದೇವಪುರ ಗ್ರಾಮದ ರೈತರು ನಾಲ್ಕೈದು ದಶಕಗಳಿಂದ ಉಳುಮೆ ಮಾಡುತ್ತಿರುವ ಜಮೀನಿನ ಬಳಿ ಇಸ್ಕಾನ್ ಸಂಸ್ಥೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸಿದೆ’ ಎಂದು ಆರೋಪಿಸಿ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.</p>.<p>ಇಲ್ಲಿನ ಮಿನಿ ವಿಧಾನಸೌಧದ ಎದುರು ಮಹಾತ್ಮ ಗಾಂಧಿ ಮತ್ತು ಅಂಬೇ ಡ್ಕರ್ ಭಾವಚಿತ್ರ ಇಟ್ಟು ಬೆಳಿಗ್ಗೆಯಿಂದ ಸಂಜೆವರೆಗೂ ಪ್ರತಿಭಟನಾ ಧರಣಿ ನಡೆಸಿದರು. ಇಸ್ಕಾನ್ ವಿರುದ್ಧ ಘೋಷಣೆ ಕೂಗಿದರು.</p>.<p>‘ರೈತರು ಕೃಷಿ ಮಾಡುತ್ತಿರುವ ಜಮೀನಿಗೆ ಗೋಪ್ಯವಾಗಿ ದಾಖಲೆ ಸೃಷ್ಟಿಸಿ ಕೊಂಡಿರುವ ಇಸ್ಕಾನ್ ಸಂಸ್ಥೆ ಗೂಂಡಾಗಳ ಮೂಲಕ ರೈತರಿಗೆ ಬೆದರಿಕೆ ಹಾಕುತ್ತಿದ್ದು, ರಕ್ಷಣೆ ನೀಡಬೇಕು’ ಎಂದು ರೈತರು ಮನವಿ ಮಾಡಿದರು.</p>.<p>‘ಮಹದೇವಪುರ ಗ್ರಾಮದ ಸ.ನಂ. 411ರಲ್ಲಿ ಗೋಮಾಳಕ್ಕೆ ಸೇರಿದ ಜಮೀನಿನಲ್ಲಿ 30ಕ್ಕೂ ಹೆಚ್ಚು ರೈತರು 40 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಅದನ್ನೇ ನೆಚ್ಚಿಕೊಂಡು ಜೀವನ ನಡೆಸುತ್ತಿದ್ದಾರೆ. ಈ ಜಮೀನನ್ನು ದರಖಾಸ್ತು ಮೂಲಕ ತಮ್ಮ ಹೆಸರಿಗೆ ಮಂಜೂರು ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಹಲವು ವರ್ಷಗಳ ಹಿಂದೆಯೇ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಇಸ್ಕಾನ್ ಸಂಸ್ಥೆ ರೈತರ ಗಮನಕ್ಕೆ ಬಾರ ದಂತೆ ರೈತರು ಅನುಭವದಲ್ಲಿ ಇರುವ ಜಮೀನಿಗೆ ದಾಖಲೆ ಸೃಷ್ಟಿಸಿಕೊಂಡಿದೆ. ಮೂರು ದಿನಗಳಿಂದ ಈ ಜಮೀನಿಗೆ ತಂತಿ ಬೇಲಿ ಹಾಕುತ್ತಿದ್ದು, ಅದನ್ನು ತಡೆಯ ಬೇಕು’ ಎಂದು ಗಂಗಾ ಮತಸ್ಥರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರತಿಉಕ್ಕಡ ಎಂ.ಚಂದ್ರು ಒತ್ತಾಯಿಸಿದರು.</p>.<p>‘ರೈತರ ಜಮೀನಿಗೆ ಇಸ್ಕಾನ್ ಸಂಸ್ಥೆ ಹಾಕಿರುವ ಬೇಲಿಯನ್ನು ಮೂರು ದಿನಗಳ ಒಳಗಾಗಿ ತೆರವು ಮಾಡಿಸಬೇಕು. ಅನುಭವದ ಆಧಾರದ ಮೇಲೆ ರೈತರ ಹೆಸರಿಗೆ ಸಾಗುವಳಿ ಚೀಟಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸುತ್ತೇವೆ’ ಎಂದು ರೈತರು ಎಚ್ಚರಿಸಿದರು.</p>.<p>ಹೆಚ್ಚುವರಿ ತಹಶೀಲ್ದಾರ್ ರೇಖಾ ಅವರಿಗೆ ಮನವಿ ಸಲ್ಲಿಸಿದರು.</p>.<p>ಕಾವೇರಯ್ಯ, ಕಾಳಯ್ಯ, ನಿಂಗಯ್ಯ, ಮುತ್ತುನಾಯಕ್, ಚಿನ್ನಸ್ವಾಮಿ, ಎನ್. ಸ್ವಾಮಿ, ನಂಜುಂಡಯ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>