ಹಣ್ಣು, ಪಾನಕ: ರಥೋತ್ಸವಕ್ಕೆ ಬಂದ ಭಕ್ತರಿಗೆ ಹರಕೆ ಹೊತ್ತವರು ಹಣ್ಣು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿದರು. ದೇವಾಲಯದ ಆಸುಪಾಸಿನಲ್ಲಿ ಮತ್ತು ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಅರವಟ್ಟಿಗೆಗಳಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು. ಸಿಡಿಎಸ್ ನಾಲೆಯ ಏರಿಯ ಮೇಲೂ ಅನ್ನ ಸಂತರ್ಪಣೆ ನಡೆಯಿತು. ಬಿಸಿಲಿನ ಝಳದಿಂದ ಬಳಲಿದ ಭಕ್ತರನ್ನು ಹಣ್ಣು, ನೀರಿನ ಸೇವೆಗಳು ತಣಿಸಿದವು.