ಪ್ರವಾಸೋದ್ಯಮ ಇಲಾಖೆ ಪ್ರಭಾರ ಉಪ ನಿರ್ದೇಶಕರೂ ಆಗಿರುವ ಪಾಂಡವಪುರ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದಮೂರ್ತಿ ಕಾರ್ಯ ನಿಮಿತ್ತ ಈ ವಾಹನದಲ್ಲಿ ಬಂದಿದ್ದರು. ಪ್ರವಾಸೋದ್ಯಮ ಇಲಾಖೆಗೆ ಸೇರಿದ ವಾಹನ (ಕೆ.ಎ–55, ಸಿ–320)ದಿಂದ ಇಳಿದು ಒಳ ಹೋದ 10 ನಿಮಿಷಗಳಲ್ಲಿ ವಾಹನದ ಎಂಜಿನಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿಹೊತ್ತಿಕೊಂಡಿದೆ.