ಗುಂಡಿನ ದಾಳಿಯಿಂದ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ ಗೆಂಡಹಳ್ಳಿ ಗ್ರಾಮದ ಗೋವಿಂದಪ್ಪ ಗಾಯಗೊಂಡಿದ್ದು ಆತನ ಮಕ್ಕಳಾದ ಶಂಕರ, ಕುಮಾರ್ ಅವರನ್ನು ಬಂಧಿಸಲಾಗಿದೆ. ಎಚ್.ಎನ್.ಕಾವಲು ಪ್ರದೇಶ ಮೀಸಲು ಅರಣ್ಯವಾಗಿದ್ದು ಗಂಧದ ಮರಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಮೂವರು ಆರೋಪಿಗಳು ಗಂಧದ ಮರ ಕಡಿಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿದರು.