ಜಾನಪದ ಸಂಸ್ಕೃತಿ ಉತ್ಸವದಲ್ಲಿ ಅಂತರರಾಷ್ಟ್ರೀಯ ಜಾನಪದ ಕಲಾವಿದ ಎಂ.ಮಹದೇವಸ್ವಾಮಿ ತಂಡದಿಂದ ಗಾಯನ, ಶೆಟ್ಟಹಳ್ಳಿ ಸಿದ್ದೇಗೌಡ ಚಿಕ್ಕಬೋರಯ್ಯ, ಕುಮಾರ್ ಅವರಿಂದ ಪೂಜಾಕುಣಿತ, ಕುಂತೂರು ಕುಮಾರ್, ಹೊನ್ನನಾಯಕನಹಳ್ಳಿ ಲಿಂಗರಾಜು ತಂಡದಿಂದ ತಮಟೆ ಪ್ರದರ್ಶನ, ಬೀಸು ಕಂಸಾಲೆ, ವೀರಗಾಸೆ ಗೊಂಬೆಕುಣಿತ ಹಾಗೂ ಎಚ್ಎಸ್ ಸರ್ವೋತ್ತಮ್, ಸಿದ್ದರಾಮು, ಶ್ರೀನಿವಾಸ್ ಅಪ್ಪಗೆರೆ ಸತೀಶ್ ಸೇರಿದಂತೆ ಜಾನಪದ ಗಾಯನ ಹಾಗೂ ಸೋಬಾನೆ ಪದ ಕಾರ್ಯಕ್ರಮ ನಡೆಯಲಿದೆ.