ಪಟ್ಟಣದಲ್ಲಿನ ಭಿಕ್ಷಕರು, ನಿರ್ಗತಿಕರು, ಬೀದಿ ವ್ಯಾಪಾರಿಗಳು, ಆಸ್ಪತ್ರೆಯ ಮಹಿಳಾ ಸ್ವಚ್ಛತಾ ಕೆಲಸಗಾರರು, ಹೋಂ ಗಾರ್ಡ್ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿಗೆ ವಿಷ್ಣುವಿಠಲ ಅವರು ಆಹಾರ ನೀಡುತ್ತಿದ್ದಾರೆ. ವಿಷ್ಣು ವಿಠಲ ಅವರು ಆಟೊದಿಂದ ಗಳಿಸಿದ ಹಣದ ಜತೆಗೆ ಇತರ ಚಾಲಕರು, ಸ್ನೇಹಿತರ ಸಹಕಾರದೊಂದಿಗೆ ಅನ್ನ ನೀಡಿ ನೆರವಾಗುತ್ತಿದ್ದಾರೆ.