ಗ್ರಾಮದಲ್ಲಿ ಹಿಂದೂ– ಮುಸ್ಲಿಮರು ಹಿಂದಿನಿಂದಲೂ ಭಾವೈಕ್ಯದಿಂದ ಬದುಕುತ್ತಿದ್ದಾರೆ. ಹಾಗಾಗಿಯೇ ವೀರಭದ್ರ ಸ್ವಾಮಿ ದೇವಾಲಯದ ಎದುರು ಅಲ್ ಹಜರತ್ ಸಯ್ಯದ್ ಮೊಹಮದ್ ಕರಿಂ ಉಲ್ಲಾ ಷಾ ಖಾದ್ರಿ ಬಾಗ್ದಾದಿ ಮಸೀದಿ ಇದೆ. ಗ್ರಾಮದ ಎಲ್ಲಾ ಹಿಂದೂಗಳು ಇಲ್ಲಿಗೆ ಬಂದು ಗಂಧದಕಡ್ಡಿ, ಕಲ್ಲು ಸಕ್ಕರೆ, ಕಡ್ಲೆ, ಪುರಿ ತಂದು ದೇವರಿಗೆಅರ್ಪಿಸಿ ಭಕ್ತಿ ಮೆರೆಯುತ್ತಾರೆ. ಪ್ರಸಾದವನ್ನು ಎಲ್ಲರೂ ಭಕ್ತಿಯಿಂದ ಸ್ವೀಕರಿಸುತ್ತಾರೆ.