<p><strong>ಮಂಡ್ಯ</strong>: ಇಲ್ಲಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ‘ಆಪ್ತ ಸಂವಾದ - ಒಂದು ಪುಸ್ತಕ ಕ್ರಾಂತಿ’ ಸರಣಿಯ ನಾಲ್ಕನೆಯ ಸಂಚಿಕೆಯು ಮೇ 3ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.</p><p>ಈ ಬಾರಿಯ ಸಂಚಿಕೆಯಲ್ಲಿ ಲೇಖಕ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರ ಜನಪ್ರಿಯ ಕೃತಿಯಾದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದ ಕುರಿತು ಸಂವಾದ ನಡೆಯಲಿದೆ. </p><p>ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಈ ಸಂವಾದವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ನಿರ್ವಹಿಸಲಿದ್ದಾರೆ.</p><p>ಪ್ರತಿ ತಿಂಗಳ ಮೊದಲ ಭಾನುವಾರ ನಿಯಮಿತವಾಗಿ ನಡೆಯುವ ಈ ಕಾರ್ಯಕ್ರಮವು ಓದುಗರು ಮತ್ತು ಲೇಖಕರ ನಡುವೆ ನೇರ ಸಂವಾದ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ವಿಶಿಷ್ಟ ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿದೆ. ಕನ್ನಡ-ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಇದನ್ನು ಆಯೋಜಿಸಿದೆ. ಇವರೊಂದಿಗೆ ಬಹುರೂಪಿ ಫೌಂಡೇಶನ್ ಹಾಗೂ ರೈತರ ಶಾಲೆಯ ಸಹಯೋಗವಿದೆ. </p><p>ಆಪ್ತ ಸಂವಾದ ಕಾರ್ಯಕ್ರಮದ ಮುಖಾಂತರ ಸಾರ್ವಜನಿಕರು ತಿಂಗಳಿಗೊಂದು ಪುಸ್ತಕವನ್ನು ಓದಿ, ಆ ಪುಸ್ತಕದ ಲೇಖಕರೊಡನೆ ಚರ್ಚಿಸುವ ವಿಶಿಷ್ಟ ಅವಕಾಶವನ್ನು ಈ ವೇದಿಕೆ ಕಲ್ಪಿಸಿಕೊಡುತ್ತಿದೆ. ಆಸಕ್ತ ಪುಸ್ತಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಇಲ್ಲಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ‘ಆಪ್ತ ಸಂವಾದ - ಒಂದು ಪುಸ್ತಕ ಕ್ರಾಂತಿ’ ಸರಣಿಯ ನಾಲ್ಕನೆಯ ಸಂಚಿಕೆಯು ಮೇ 3ರ ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.</p><p>ಈ ಬಾರಿಯ ಸಂಚಿಕೆಯಲ್ಲಿ ಲೇಖಕ, ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರ ಜನಪ್ರಿಯ ಕೃತಿಯಾದ ‘ನನ್ನೊಳಗಿನ ಹಾಡು ಕ್ಯೂಬಾ’ ಪುಸ್ತಕದ ಕುರಿತು ಸಂವಾದ ನಡೆಯಲಿದೆ. </p><p>ಕಿರುಚಿತ್ರ ನಿರ್ದೇಶಕ ವಿನಯ್ ಕುಮಾರ್ ಎಂ.ಜಿ. ಈ ಸಂವಾದವನ್ನು ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಪರಿಚಯ ಪ್ರಕಾಶನದ ಸಂಸ್ಥಾಪಕ ಶಿವಕುಮಾರ್ ಆರಾಧ್ಯ ನಿರ್ವಹಿಸಲಿದ್ದಾರೆ.</p><p>ಪ್ರತಿ ತಿಂಗಳ ಮೊದಲ ಭಾನುವಾರ ನಿಯಮಿತವಾಗಿ ನಡೆಯುವ ಈ ಕಾರ್ಯಕ್ರಮವು ಓದುಗರು ಮತ್ತು ಲೇಖಕರ ನಡುವೆ ನೇರ ಸಂವಾದ ಏರ್ಪಡಿಸುವ ಮೂಲಕ ಜಿಲ್ಲೆಯಲ್ಲಿ ವಿಶಿಷ್ಟ ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿದೆ. ಕನ್ನಡ-ಕರ್ನಾಟಕ ಫೌಂಡೇಷನ್ ಹಾಗೂ ಎಂಪ್ಟಿ ಪಾಕೆಟ್ ಡ್ರೀಮ್ಸ್ ಇದನ್ನು ಆಯೋಜಿಸಿದೆ. ಇವರೊಂದಿಗೆ ಬಹುರೂಪಿ ಫೌಂಡೇಶನ್ ಹಾಗೂ ರೈತರ ಶಾಲೆಯ ಸಹಯೋಗವಿದೆ. </p><p>ಆಪ್ತ ಸಂವಾದ ಕಾರ್ಯಕ್ರಮದ ಮುಖಾಂತರ ಸಾರ್ವಜನಿಕರು ತಿಂಗಳಿಗೊಂದು ಪುಸ್ತಕವನ್ನು ಓದಿ, ಆ ಪುಸ್ತಕದ ಲೇಖಕರೊಡನೆ ಚರ್ಚಿಸುವ ವಿಶಿಷ್ಟ ಅವಕಾಶವನ್ನು ಈ ವೇದಿಕೆ ಕಲ್ಪಿಸಿಕೊಡುತ್ತಿದೆ. ಆಸಕ್ತ ಪುಸ್ತಕ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>