<p><strong>ಹಲಗೂರು</strong>: ಸಮೀಪದ ಗುಂಡಾಪುರ ಗ್ರಾಮದ ಬಸವನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದ ಅರಸಮ್ಮ ದೇವಿಯ ಜಾತ್ರೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.</p>.<p>ಗುಂಡಾಪುರ, ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಹಗಾದೂರು, ಕೆಂಪಯ್ಯನದೊಡ್ಡಿ, ಮತ್ತು ಎಚ್.ಬಸಾಪುರ, ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಕ್ತರು ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದರು.</p>.<p>ದೇವಿಯ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಗುಡ್ಡರು ಹೆಬ್ಬಾರೆಯನ್ನು ಬಾರಿಸುತ್ತಾ ಮುನ್ನಡೆದರು. ಜೋಡಿ ಬಸವನ ಜೊತೆ ಮೆರವಣಿಗೆಯಲ್ಲಿ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ತರಲಾಯಿತು. ಹರಕೆ ಹೊತ್ತ ಸಾವಿರಾರು ಭಕ್ತರು ಬಾಯಿ ಬೀಗ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮುನ್ನಡೆದು ಹರಕೆ ತೀರಿಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಜಾತ್ರೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.</p>.<p>ಪಾನಕ ವಿತರಣೆ: ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಬಿಸಿಲ ದಾಹ ತಣಿಸಲು ಮಧ್ಯಾಹ್ನದಿಂದ ಸಂಜೆಯವರೆಗೆ ಮಜ್ಜಿಗೆ, ಪಾನಕ ವಿತರಣೆ ನಡೆಯಿತು. ಹಲವಾರು ಗ್ರಾಮಗಳ ಹರಕೆ ಹೊತ್ತ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ಬೇಲದ ಹಣ್ಣಿನ ಪಾನಕ, ನಿಂಬೆ ಹಣ್ಣಿನ ಷರಬತ್ತು, ಮಜ್ಜಿಗೆಯನ್ನು ವಿತರಿಸಿದರು.</p>.<p><strong>ಗಮನ ಸೆಳೆದ ಪರದೇಶಿ ಕುಣಿತ:</strong></p>.<p>ಸಮೀಪದ ಬಾಳೆಹೊನ್ನಿಗ ಗ್ರಾಮದ ನೂರಾರು ಯುವಕರು ಮತ್ತು ಹರಕೆ ಹೊತ್ತ ಭಕ್ತರು ಚಿತ್ರ, ವಿಚಿತ್ರ ಬಟ್ಟೆಗಳನ್ನು ತೊಟ್ಟು ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡು ತೆಂಗಿನ ಮಟ್ಟೆಯಿಂದ ತಯಾರಿಸಿದ ಕೋವಿ ಹಿಡಿದು ಗೋಣಿ ಚೀಲವನ್ನು ವಿವಿಧ ಆಕಾರಗಳಲ್ಲಿ ಸಿದ್ದಪಡಿಸಿ, ಧರಿಸಿಕೊಂಡು ಮನರಂಜನೆ ನೀಡಿದರು.</p>.<p>ಪರದೇಶಿಗಳು ಕರಗದ ಮನೆಗೆ ಬಂದಾಗ ದೇವರ ಕರಗವನ್ನು ಹೊತ್ತ ಪೂಜಾರರು ಪರದೇಶಿಗಳು ಬಂದ ನಂತರ ದೇವರ ಪೂಜೆ ಹೊತ್ತು ಮುನ್ನೆಡೆದರು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.</p>.<p>ಸೂಕ್ತ ಪೊಲೀಸ್ ಬಂದೋಬಸ್ತ್: ರಾಮನಗರ, ಕನಕಪುರ, ಮಳವಳ್ಳಿ, ಚನ್ನಪಟ್ಟಣ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶ್ರೀಧರ್, ಮತ್ತು ಪಿಎಸ್ಐ ಲೋಕೇಶ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಲಗೂರು</strong>: ಸಮೀಪದ ಗುಂಡಾಪುರ ಗ್ರಾಮದ ಬಸವನ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಬೆಟ್ಟದ ಅರಸಮ್ಮ ದೇವಿಯ ಜಾತ್ರೋತ್ಸವ ಮಂಗಳವಾರ ಸಂಭ್ರಮದಿಂದ ನೆರವೇರಿತು.</p>.<p>ಗುಂಡಾಪುರ, ಬಾಳೆ ಹೊನ್ನಿಗ, ದಳವಾಯಿ ಕೋಡಿಹಳ್ಳಿ, ನಂದೀಪುರ, ಹಗಾದೂರು, ಕೆಂಪಯ್ಯನದೊಡ್ಡಿ, ಮತ್ತು ಎಚ್.ಬಸಾಪುರ, ಹಲಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಭಕ್ತರು ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡು ದರ್ಶನ ಪಡೆದರು.</p>.<p>ದೇವಿಯ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಗುಡ್ಡರು ಹೆಬ್ಬಾರೆಯನ್ನು ಬಾರಿಸುತ್ತಾ ಮುನ್ನಡೆದರು. ಜೋಡಿ ಬಸವನ ಜೊತೆ ಮೆರವಣಿಗೆಯಲ್ಲಿ ಬೆಟ್ಟದರಸಮ್ಮನ ಸನ್ನಿಧಿಗೆ ಕರಗವನ್ನು ತರಲಾಯಿತು. ಹರಕೆ ಹೊತ್ತ ಸಾವಿರಾರು ಭಕ್ತರು ಬಾಯಿ ಬೀಗ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡರು. ಕಳಸ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಮುನ್ನಡೆದು ಹರಕೆ ತೀರಿಸಿದರು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸೇರಿದಂತೆ ಹಲವಾರು ಗಣ್ಯರು ಜಾತ್ರೋತ್ಸವದಲ್ಲಿ ಭಾಗವಹಿಸಿ ದೇವಿಯ ದರ್ಶನ ಪಡೆದರು.</p>.<p>ಪಾನಕ ವಿತರಣೆ: ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಬಿಸಿಲ ದಾಹ ತಣಿಸಲು ಮಧ್ಯಾಹ್ನದಿಂದ ಸಂಜೆಯವರೆಗೆ ಮಜ್ಜಿಗೆ, ಪಾನಕ ವಿತರಣೆ ನಡೆಯಿತು. ಹಲವಾರು ಗ್ರಾಮಗಳ ಹರಕೆ ಹೊತ್ತ ಭಕ್ತರು ಟ್ರ್ಯಾಕ್ಟರ್, ಎತ್ತಿನ ಗಾಡಿಯಲ್ಲಿ ಬೇಲದ ಹಣ್ಣಿನ ಪಾನಕ, ನಿಂಬೆ ಹಣ್ಣಿನ ಷರಬತ್ತು, ಮಜ್ಜಿಗೆಯನ್ನು ವಿತರಿಸಿದರು.</p>.<p><strong>ಗಮನ ಸೆಳೆದ ಪರದೇಶಿ ಕುಣಿತ:</strong></p>.<p>ಸಮೀಪದ ಬಾಳೆಹೊನ್ನಿಗ ಗ್ರಾಮದ ನೂರಾರು ಯುವಕರು ಮತ್ತು ಹರಕೆ ಹೊತ್ತ ಭಕ್ತರು ಚಿತ್ರ, ವಿಚಿತ್ರ ಬಟ್ಟೆಗಳನ್ನು ತೊಟ್ಟು ಬೇವಿನ ಸೊಪ್ಪನ್ನು ಸೊಂಟಕ್ಕೆ ಕಟ್ಟಿಕೊಂಡು ತೆಂಗಿನ ಮಟ್ಟೆಯಿಂದ ತಯಾರಿಸಿದ ಕೋವಿ ಹಿಡಿದು ಗೋಣಿ ಚೀಲವನ್ನು ವಿವಿಧ ಆಕಾರಗಳಲ್ಲಿ ಸಿದ್ದಪಡಿಸಿ, ಧರಿಸಿಕೊಂಡು ಮನರಂಜನೆ ನೀಡಿದರು.</p>.<p>ಪರದೇಶಿಗಳು ಕರಗದ ಮನೆಗೆ ಬಂದಾಗ ದೇವರ ಕರಗವನ್ನು ಹೊತ್ತ ಪೂಜಾರರು ಪರದೇಶಿಗಳು ಬಂದ ನಂತರ ದೇವರ ಪೂಜೆ ಹೊತ್ತು ಮುನ್ನೆಡೆದರು. ಜನಸಂದಣಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.</p>.<p>ಸೂಕ್ತ ಪೊಲೀಸ್ ಬಂದೋಬಸ್ತ್: ರಾಮನಗರ, ಕನಕಪುರ, ಮಳವಳ್ಳಿ, ಚನ್ನಪಟ್ಟಣ, ಮೈಸೂರು, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹಲಗೂರು ಸರ್ಕಲ್ ಇನ್ಸ್ಪೆಕ್ಟರ್ ಬಿ.ಎಸ್.ಶ್ರೀಧರ್, ಮತ್ತು ಪಿಎಸ್ಐ ಲೋಕೇಶ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಏರ್ಪಡಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>