<p>ಕೆ.ಆರ್.ಪೇಟೆ: ಹೇಮಾವತಿ ಎಡದಂಡೆ ನಾಲಾ ಅಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ತಾಲ್ಲೂಕು ರೈತಸಂಘದ ಕಾರ್ಯಕರ್ತರು ಬುಧವಾರ ಬೈಕ್ ರ್ಯಾಲಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟಿಸಲು ನಾಗಮಂಗಲಕ್ಕೆ ತೆರಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟ ರೈತರು ಎಚ್.ಎಲ್.ಬಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಹಕ್ಕೊತ್ತಾಯ ಮಂಡಿಸಿದರಲ್ಲದೇ ಅಕ್ರಮ ನಡೆದಿದೆ ಎಂದು ಹೇಳಲಾದ ಹೇಮಾವತಿ ಎಡದಂಡೆಯ ನಾಲಾ ಏರಿಗಳ ಉದ್ದಕ್ಕೂ ಜನಜಾಗೃತಿ ರ್ಯಾಲಿ ನಡೆಸಿದರು.</p>.<p>ರೈತಸಮಂದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ, ‘ಹೇಮಾವತಿ ಎಡದಂಡೆ ನಾಲೆಯ ಸರಪಳಿ 72.260ರಿಂದ 214.300ನೇ ಕಿ.ಮೀವರೆಗೆ ನಡೆದ ಆಧುನೀಕರಣ ಕಾಮಗಾರಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ0 ವ್ಯಾಪಕ ಭ್ರಷ್ಟಾಚಾರ ನಡೆದಿದೆ. ನಾಲಾ ಏರಿಗಳ ಮೇಲೆ ನಿಯಮಾನುಸಾರ ರಕ್ಷಣಾ ಕಲ್ಲುಗಳು, ಗಡಿ ಕಲ್ಲುಗಳು, ಮಳೆಯ ನೀರು ಕಾಲುವೆಗೆ ಬೀಳದಂತೆ ತೋಡಬೇಕಾದ ಡ್ರೈನ್, ಗ್ರಾವೆಲ್ ಮಣ್ಣು ಬಳಕೆ ಮಾಡದಿರುವುದು, ಗಾಡಿ ಸೇತುವೆಗಳನ್ನು ಕಟ್ಟದಿರುವುದು, ಸೇವಾ ರಸ್ತೆಗಳಿಗೆ ಕಾಂಕ್ರೀಟ್ ಹಾಕದಿರುವುದು, ಕಳಪೆ ಲೈನಿಂಗ್ ಕಾಮಗಾರಿಗಳನ್ನು ಮಾಡದೇ ಸುಮಾರು ₹500 ಕೋಟಿಗೂ ಅಧಿಕ ಸಾರ್ವಜನಿಕರ ಹಣವನ್ನು ದೋಚಲಾಗಿದೆ’ ಎಂದು ಆರೋಪಿಸಿದರು.</p>.<p>‘ಹೇಮಾವತಿ ನಾಲಾ ಆಧುನೀಕರಣದ ಅವ್ಯವಹಾರದ ರಾಜ್ಯ ರೈತಸಂಘ ಸಂಪೂರ್ಣ ದಾಖಲೆಗಳ ಸಮೇತ ಮುಖ್ಯಮಂತ್ರಿಗಳಿಗೆ ದಾಖಲಾತಿಗಳನ್ನು ನೀಡಿದರೂ ಭ್ರಷ್ಟರ ಬಗ್ಗೆ ಕ್ರಮ ಜರುಗಿಸಿಲ್ಲ. ತಾಂತ್ರಿಕ ಸಲಹೆಗಾರ ಎಂ.ಕೆ. ವೆಂಕಟರಾಮ್ ನೇತೃತ್ವದಲ್ಲಿ ರಚಿಸಿದ್ದ ಸತ್ಯ ಶೋಧನಾ ಸಮಿತಿ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ಪರವಾಗಿ ಸುಳ್ಳು ವರದಿ ನೀಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ನಾಲಾ ಅಧುನೀಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.</p>.<p>ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಶವ್, ರೈತ ಮುಖಂಡರಾದ ಎಲ್.ಬಿ. ಜಗದೀಶ್, ಹಿರೀಕಳಲೆ ಬಸವರಾಜು, ಕೃಷ್ಣಾಪುರ ರಾಜಣ್ಣ, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಬೂಕನಕೆರೆ ನಾಗರಾಜು , ಮುಖಂಡ ಜಿ.ಆರ್. ಜಯಣ್ಣ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಆರ್.ಪೇಟೆ: ಹೇಮಾವತಿ ಎಡದಂಡೆ ನಾಲಾ ಅಧುನೀಕರಣ ಕಾಮಗಾರಿಯಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ತಾಲ್ಲೂಕು ರೈತಸಂಘದ ಕಾರ್ಯಕರ್ತರು ಬುಧವಾರ ಬೈಕ್ ರ್ಯಾಲಿ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರ ಮನೆಯ ಮುಂದೆ ಪ್ರತಿಭಟಿಸಲು ನಾಗಮಂಗಲಕ್ಕೆ ತೆರಳಿದರು.</p>.<p>ಪಟ್ಟಣದ ಪ್ರವಾಸಿ ಮಂದಿರ ವೃತ್ತದಿಂದ ಹೊರಟ ರೈತರು ಎಚ್.ಎಲ್.ಬಿ.ಸಿ ಕಚೇರಿಗೆ ಮುತ್ತಿಗೆ ಹಾಕಿ ಹಕ್ಕೊತ್ತಾಯ ಮಂಡಿಸಿದರಲ್ಲದೇ ಅಕ್ರಮ ನಡೆದಿದೆ ಎಂದು ಹೇಳಲಾದ ಹೇಮಾವತಿ ಎಡದಂಡೆಯ ನಾಲಾ ಏರಿಗಳ ಉದ್ದಕ್ಕೂ ಜನಜಾಗೃತಿ ರ್ಯಾಲಿ ನಡೆಸಿದರು.</p>.<p>ರೈತಸಮಂದ ಹಿರಿಯ ಮುಖಂಡ ಮುದುಗೆರೆ ರಾಜೇಗೌಡ ಮಾತನಾಡಿ, ‘ಹೇಮಾವತಿ ಎಡದಂಡೆ ನಾಲೆಯ ಸರಪಳಿ 72.260ರಿಂದ 214.300ನೇ ಕಿ.ಮೀವರೆಗೆ ನಡೆದ ಆಧುನೀಕರಣ ಕಾಮಗಾರಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳ0 ವ್ಯಾಪಕ ಭ್ರಷ್ಟಾಚಾರ ನಡೆದಿದೆ. ನಾಲಾ ಏರಿಗಳ ಮೇಲೆ ನಿಯಮಾನುಸಾರ ರಕ್ಷಣಾ ಕಲ್ಲುಗಳು, ಗಡಿ ಕಲ್ಲುಗಳು, ಮಳೆಯ ನೀರು ಕಾಲುವೆಗೆ ಬೀಳದಂತೆ ತೋಡಬೇಕಾದ ಡ್ರೈನ್, ಗ್ರಾವೆಲ್ ಮಣ್ಣು ಬಳಕೆ ಮಾಡದಿರುವುದು, ಗಾಡಿ ಸೇತುವೆಗಳನ್ನು ಕಟ್ಟದಿರುವುದು, ಸೇವಾ ರಸ್ತೆಗಳಿಗೆ ಕಾಂಕ್ರೀಟ್ ಹಾಕದಿರುವುದು, ಕಳಪೆ ಲೈನಿಂಗ್ ಕಾಮಗಾರಿಗಳನ್ನು ಮಾಡದೇ ಸುಮಾರು ₹500 ಕೋಟಿಗೂ ಅಧಿಕ ಸಾರ್ವಜನಿಕರ ಹಣವನ್ನು ದೋಚಲಾಗಿದೆ’ ಎಂದು ಆರೋಪಿಸಿದರು.</p>.<p>‘ಹೇಮಾವತಿ ನಾಲಾ ಆಧುನೀಕರಣದ ಅವ್ಯವಹಾರದ ರಾಜ್ಯ ರೈತಸಂಘ ಸಂಪೂರ್ಣ ದಾಖಲೆಗಳ ಸಮೇತ ಮುಖ್ಯಮಂತ್ರಿಗಳಿಗೆ ದಾಖಲಾತಿಗಳನ್ನು ನೀಡಿದರೂ ಭ್ರಷ್ಟರ ಬಗ್ಗೆ ಕ್ರಮ ಜರುಗಿಸಿಲ್ಲ. ತಾಂತ್ರಿಕ ಸಲಹೆಗಾರ ಎಂ.ಕೆ. ವೆಂಕಟರಾಮ್ ನೇತೃತ್ವದಲ್ಲಿ ರಚಿಸಿದ್ದ ಸತ್ಯ ಶೋಧನಾ ಸಮಿತಿ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ಪರವಾಗಿ ಸುಳ್ಳು ವರದಿ ನೀಡಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ನಾಲಾ ಅಧುನೀಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಎಂಜಿನಿಯರ್ಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.</p>.<p>ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್, ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಲತಾ ಕೇಶವ್, ರೈತ ಮುಖಂಡರಾದ ಎಲ್.ಬಿ. ಜಗದೀಶ್, ಹಿರೀಕಳಲೆ ಬಸವರಾಜು, ಕೃಷ್ಣಾಪುರ ರಾಜಣ್ಣ, ಕರೋಟಿ ತಮ್ಮಯ್ಯ, ಹೊನ್ನೇಗೌಡ, ಬೂಕನಕೆರೆ ನಾಗರಾಜು , ಮುಖಂಡ ಜಿ.ಆರ್. ಜಯಣ್ಣ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>