ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕರೆ ಕೊಟ್ಟರೆ ಕಾಂಗ್ರೆಸ್‌ ಖಾಲಿ: ಶಾಸಕ ಮುನಿರತ್ನ

Last Updated 27 ಏಪ್ರಿಲ್ 2022, 4:48 IST
ಅಕ್ಷರ ಗಾತ್ರ

ಮದ್ದೂರು: ‘ಬಿಜೆಪಿಗೆ ಸೇರುವಂತೆ ಕಾಂಗ್ರೆಸ್‌ ಶಾಸಕರಿಗೆ ಕರೆ ಕೊಟ್ಟರೆ ಆ ಪಕ್ಷ ಖಾಲಿಯಾಗಿ ಬಿಡುತ್ತದೆ. ಚುನಾವಣೆ ಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇರುವುದಿಲ್ಲ’ ಎಂದು ತೋಟಗಾರಿಕಾ ಸಚಿವ ಎನ್‌.ಮುನಿರತ್ನ ವ್ಯಂಗ್ಯ ವಾಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನಿಂದ ಬಂದಿರುವ ನಮಗೂ ಬಿಜೆಪಿಯಲ್ಲಿ ಸ್ಥಾನಮಾನ ಗಳಿವೆ. ನಮ್ಮನ್ನೂ ಕರೆದುಕೊಂಡು ಹೋಗಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ’ ಎಂದು ಅವರು
ಹೇಳಿದರು.

‘ರೈತರಿಗೆ ಮಳೆ ಹಾನಿ ಪರಿಹಾರ ವಿತರಿಸಿಲ್ಲ ಎಂಬ ಕಾಂಗ್ರೆಸ್‌ನ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಸರ್ಕಾರವಿದ್ದಾಗ 6 ತಿಂಗಳಾದರೂ ಪರಿಹಾರ ನೀಡಿರಲಿಲ್ಲ’ ಎಂದು ದೂರಿದರು.

‘ಬಿಜೆಪಿ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂಬ ಆರೋಪವೂ ನಿರಾಧಾರ. ಕಾಂಗ್ರೆಸ್‌ನವರಿಗೆ ಬಿಜೆಪಿಯನ್ನು ಟೀಕಿಸುವುದೇ ಹವ್ಯಾಸವಾಗಿಬಿಟ್ಟಿದೆ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT