ಮದ್ದೂರು: ‘ಬಿಜೆಪಿಗೆ ಸೇರುವಂತೆ ಕಾಂಗ್ರೆಸ್ ಶಾಸಕರಿಗೆ ಕರೆ ಕೊಟ್ಟರೆ ಆ ಪಕ್ಷ ಖಾಲಿಯಾಗಿ ಬಿಡುತ್ತದೆ. ಚುನಾವಣೆ ಯಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇರುವುದಿಲ್ಲ’ ಎಂದು ತೋಟಗಾರಿಕಾ ಸಚಿವ ಎನ್.ಮುನಿರತ್ನ ವ್ಯಂಗ್ಯ ವಾಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ನಿಂದ ಬಂದಿರುವ ನಮಗೂ ಬಿಜೆಪಿಯಲ್ಲಿ ಸ್ಥಾನಮಾನ ಗಳಿವೆ. ನಮ್ಮನ್ನೂ ಕರೆದುಕೊಂಡು ಹೋಗಿ ಎಂದು ಕೆಲವರು ಮನವಿ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.
‘ರೈತರಿಗೆ ಮಳೆ ಹಾನಿ ಪರಿಹಾರ ವಿತರಿಸಿಲ್ಲ ಎಂಬ ಕಾಂಗ್ರೆಸ್ನ ಆರೋಪ ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಸರ್ಕಾರವಿದ್ದಾಗ 6 ತಿಂಗಳಾದರೂ ಪರಿಹಾರ ನೀಡಿರಲಿಲ್ಲ’ ಎಂದು ದೂರಿದರು.
‘ಬಿಜೆಪಿ ಸರ್ಕಾರದಿಂದ ಯಾವುದೇ ಅನುದಾನ ಬರುತ್ತಿಲ್ಲ ಎಂಬ ಆರೋಪವೂ ನಿರಾಧಾರ. ಕಾಂಗ್ರೆಸ್ನವರಿಗೆ ಬಿಜೆಪಿಯನ್ನು ಟೀಕಿಸುವುದೇ ಹವ್ಯಾಸವಾಗಿಬಿಟ್ಟಿದೆ’ ಎಂದು ಕಿಡಿಕಾರಿದರು.