ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಜೆಡಿಎಸ್ ಪಕ್ಷವನ್ನು ಹಳ್ಳ ಹಿಡಿಸುವುದಕ್ಕಾಗಿಯೇ ಸಿ.ಎಂ.ಇಬ್ರಾಹಿಂ ಟಿಪ್ಪು ಪರ ಮಾತನಾಡುತ್ತಿದ್ದಾರೆ. ಟಿಪ್ಪು ಬೇಕಾ, ನಾಲ್ವಡಿ ಕೃಷ್ಣರಾಜ ಒಡೆಯರ್ ಬೇಕಾ ಎಂಬ ಪ್ರಶ್ನೆಗೆ ಜನರೇ ಉತ್ತರ ಕೊಡುತ್ತಾರೆ. ಪರಕೀಯ ವ್ಯಕ್ತಿಯನ್ನು ಅಭಿಮಾನಿಸುವ ಕಾಲ ಹೋಗಿದೆ, ತುಷ್ಠೀಕರಣ ರಾಜಕಾರಣ ಮಾಯವಾಗಿದೆ’ ಎಂದರು.