ಮಂಡ್ಯ: ಕೆಆರ್ಎಸ್ ಜಲಾಶಯ ಬಹುತೇಕ ಭರ್ತಿಯಾಗಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬುಧವಾರ ಮಧ್ಯಾಹ್ನ 12.10ಕ್ಕೆ ಬಾಗಿನ ಅರ್ಪಿಸಲಿದ್ದಾರೆ.
ಮಂಗಳವಾರ ಸಂಜೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 124.74 ಅಡಿಗೆ ತಲುಪಿದೆ. ರಾತ್ರಿಯ ವೇಳೆಗೆ ಗರಿಷ್ಠ ಮಟ್ಟ 124.80 ಅಡಿಗೆ ತಲುಪಲಿದೆ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಜಲಾಶಯಕ್ಕೆ 59,734 ಕ್ಯುಸೆಕ್ ಒಳಹರಿವು, 57,411 ಕ್ಯುಸೆಕ್ ಹೊರಹರಿವು ಇದೆ.