<p>ಕಿಕ್ಕೇರಿ: ಬಾದಾಮಿ ಅಮಾವಾಸ್ಯೆ ಹಾಗೂ ಶನೇಶ್ವರಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಕೋಟೆ ವೀರಾಂಜನೇಯಸ್ವಾಮಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶನಿವಾರ ಸಂಜೆ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು.</p>.<p>ಅರ್ಚಕ ವೆಂಕಟೇಶ್ ಪವನಸುತನಿಗೆ ಸಂಕಲ್ಪ ಪೂಜೆ ನೆರವೇರಿಸಿದರು. ಬಳಿಕ ಎಣ್ಣೆ ಮಜ್ಜನ ಸೇವೆ ನಡೆಯಿತು. ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ದ್ರಾಕ್ಷಿ, ಗೋಡಂಬಿ ಮತ್ತಿತರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.</p>.<p>ಸಿದ್ದರೂಢಸ್ವಾಮಿ ಮಠದಲ್ಲಿನ ಶನೇಶ್ವರ, ಲಕ್ಷ್ಮೀಪುರ, ತುಳಸಿಗೇಟ್ ಬಳಿಯ ಶನೇಶ್ವರ ಗುಡಿಯಲ್ಲಿ ಶನೇಶ್ವರ ಜಯಂತಿ ಅಂಗವಾಗಿ ಭಕ್ತರು ದೇವರಿಗೆ ಎಳ್ಳೆಣ್ಣೆ ಸೇವೆ ನೆರವೇರಿಸಿದರು. ಕಪ್ಪು ವಸ್ತ್ರದಲ್ಲಿ ಕರಿಎಳ್ಳಿನ ಉಂಡೆ ಕಟ್ಟಿಕೊಂಡು ದೀಪ ಹಚ್ಚಿ ಕಷ್ಟಗಳನ್ನು ಬಗೆಹರಿಸಲು ಪ್ರಾರ್ಥಿಸಿದರು.</p>.<p>ಬ್ರಹ್ಮೇಶ್ವರ ಮೂರ್ತಿ, ಕಾಲಭೈರವೇಶ್ವರ, ಕಿಕ್ಕೇರಮ್ಮ ದೇಗುಲ, ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ದೊಡ್ಡತರಹಳ್ಳಿ ವೀರಭದ್ರೇಶ್ವರಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಚಿಕ್ಕಳಲೆ ಚಿಕ್ಕಳಮ್ಮ, ಮಂದಗೆರೆ ಕಟ್ಟೆಪರಮೇಶ್ವರಿ, ಗುಂಡುಮಾರಿಯಮ್ಮ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-40-1528416537</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಕ್ಕೇರಿ: ಬಾದಾಮಿ ಅಮಾವಾಸ್ಯೆ ಹಾಗೂ ಶನೇಶ್ವರಸ್ವಾಮಿ ಜಯಂತಿ ಅಂಗವಾಗಿ ಇಲ್ಲಿನ ಕೋಟೆ ವೀರಾಂಜನೇಯಸ್ವಾಮಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ಶನಿವಾರ ಸಂಜೆ ವಿಶೇಷ ಪೂಜೆಗಳು ವಿಜೃಂಭಣೆಯಿಂದ ನೆರವೇರಿದವು.</p>.<p>ಅರ್ಚಕ ವೆಂಕಟೇಶ್ ಪವನಸುತನಿಗೆ ಸಂಕಲ್ಪ ಪೂಜೆ ನೆರವೇರಿಸಿದರು. ಬಳಿಕ ಎಣ್ಣೆ ಮಜ್ಜನ ಸೇವೆ ನಡೆಯಿತು. ಪಂಚಾಮೃತ ಅಭಿಷೇಕ, ಎಳನೀರು, ಜೇನುತುಪ್ಪ, ಮೊಸರು, ಸಕ್ಕರೆ, ದ್ರಾಕ್ಷಿ, ಗೋಡಂಬಿ ಮತ್ತಿತರ ದ್ರವ್ಯಗಳಿಂದ ಅಭಿಷೇಕ ನೆರವೇರಿಸಲಾಯಿತು.</p>.<p>ಸಿದ್ದರೂಢಸ್ವಾಮಿ ಮಠದಲ್ಲಿನ ಶನೇಶ್ವರ, ಲಕ್ಷ್ಮೀಪುರ, ತುಳಸಿಗೇಟ್ ಬಳಿಯ ಶನೇಶ್ವರ ಗುಡಿಯಲ್ಲಿ ಶನೇಶ್ವರ ಜಯಂತಿ ಅಂಗವಾಗಿ ಭಕ್ತರು ದೇವರಿಗೆ ಎಳ್ಳೆಣ್ಣೆ ಸೇವೆ ನೆರವೇರಿಸಿದರು. ಕಪ್ಪು ವಸ್ತ್ರದಲ್ಲಿ ಕರಿಎಳ್ಳಿನ ಉಂಡೆ ಕಟ್ಟಿಕೊಂಡು ದೀಪ ಹಚ್ಚಿ ಕಷ್ಟಗಳನ್ನು ಬಗೆಹರಿಸಲು ಪ್ರಾರ್ಥಿಸಿದರು.</p>.<p>ಬ್ರಹ್ಮೇಶ್ವರ ಮೂರ್ತಿ, ಕಾಲಭೈರವೇಶ್ವರ, ಕಿಕ್ಕೇರಮ್ಮ ದೇಗುಲ, ಸಾಸಲು ಸೋಮೇಶ್ವರ, ಶಂಭುಲಿಂಗೇಶ್ವರ, ದೊಡ್ಡತರಹಳ್ಳಿ ವೀರಭದ್ರೇಶ್ವರಸ್ವಾಮಿ, ಬೋಳಮಾರನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ, ಚಿಕ್ಕಳಲೆ ಚಿಕ್ಕಳಮ್ಮ, ಮಂದಗೆರೆ ಕಟ್ಟೆಪರಮೇಶ್ವರಿ, ಗುಂಡುಮಾರಿಯಮ್ಮ ಮತ್ತಿತರ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260518-40-1528416537</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>