<p><strong>ಕಿಕ್ಕೇರಿ:</strong> ‘ಆಧುನಿಕ ತಂತ್ರಜ್ಞಾನ ಯುಗದಲ್ಲಿ ಧಾರ್ಮಿಕ ಚಿಂತನೆ, ಆಧ್ಯಾತ್ಮ ಬದುಕು ಉಸಿರಾಗಿದೆ ಎನ್ನಲು ಗ್ರಾಮೀಣ ಪ್ರದೇಶದಲ್ಲಿರುವ ಶ್ರದ್ಧೆ, ಭಕ್ತಿ ಕಾರಣವಾಗಿದೆ’ ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ಹೇಳಿದರು.</p>.<p>ಹೋಬಳಿಯ ಲಿಂಗಾಪುರ ಗ್ರಾಮದೇವತೆ ಕನ್ನಂಬಾಡಮ್ಮ ನೂತನ ದೇಗುಲ ನಿರ್ಮಾಣಕ್ಕೆ ಶನಿವಾರ ಆರ್ಥಿಕ ಸಹಾಯದ ನೆರವು ನೀಡಿ ಅವರು ಮಾತನಾಡಿದರು.</p>.<p>‘ಧಾರ್ಮಿಕವಾಗಿ ಭಕ್ತಿ ಮಾರ್ಗದ ಮೂಲಕ ಶಕ್ತಿ ನೀಡಿ ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ದೇಗುಲಗಳ ಮೂಲಕ ದೇವರು ನೆಮ್ಮದಿ ನೀಡಿದ್ದಾನೆ. ಈ ಗ್ರಾಮದಲ್ಲಿ ಮನೆಕೆಲಸ ಬಿಟ್ಟು ಸ್ವಂತ ಕೆಲಸದಂತೆ ಸುಂದರ ದೇಗುಲ ನಿರ್ಮಾಣಕ್ಕೆ ಕಾರಣವಾಗಿರುವ ಗ್ರಾಮಸ್ಥರು ಮಾದರಿಯಾಗಿದ್ದಾರೆ’ ಎಂದರು.</p>.<p>‘ಗ್ರಾಮಸ್ಥರು ಧಾರ್ಮಿಕ ಚಿಂತನೆಗಳ ಜತೆ ಗ್ರಾಮಾಭಿವೃದ್ಧಿಗೆ ಮುಂದಾಗಿ, ಚಿಂತನಾಶೀಲ ಬದುಕು ರೂಢಿಸಿಕೊಳ್ಳಿ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಕಾಯಕಕ್ಕೆ ಮುಂದಾದರೆ ಬದುಕಿನಲ್ಲಿ ಸಾರ್ಥಕತೆಯ ಅರ್ಥ ಕಾಣಬಹುದು’ ಎಂದರು.</p>.<p>ಈಚೆಗೆ ಕೆರೆಗೆ ಕಾಲುಜಾರಿ ಬಿದ್ದು ಮೃತಪಟ್ಟ ಯುವಕ ಅರುಣಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.</p>.<p>ಮುಖಂಡರಾದ ಕೆಂಗಯ್ಯ, ಬಸಪ್ಪ, ಬಸವಯ್ಯ, ಶಂಕರಯ್ಯ, ಸುಖೇಂದ್ರ, ಪುಟ್ಟರಾಜು, ಮಹಾದೇವ, ಸ್ವಾಮಿ, ನಿಂಗರಾಜು, ಶಿವರಾಜು, ಸಣ್ಣಯ್ಯ, ಪಾಪಯ್ಯ, ದೊಡಣ್ಣ, ಗಂಜಿಗೆರೆ ಮಹೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಿಕ್ಕೇರಿ:</strong> ‘ಆಧುನಿಕ ತಂತ್ರಜ್ಞಾನ ಯುಗದಲ್ಲಿ ಧಾರ್ಮಿಕ ಚಿಂತನೆ, ಆಧ್ಯಾತ್ಮ ಬದುಕು ಉಸಿರಾಗಿದೆ ಎನ್ನಲು ಗ್ರಾಮೀಣ ಪ್ರದೇಶದಲ್ಲಿರುವ ಶ್ರದ್ಧೆ, ಭಕ್ತಿ ಕಾರಣವಾಗಿದೆ’ ಎಂದು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ಹೇಳಿದರು.</p>.<p>ಹೋಬಳಿಯ ಲಿಂಗಾಪುರ ಗ್ರಾಮದೇವತೆ ಕನ್ನಂಬಾಡಮ್ಮ ನೂತನ ದೇಗುಲ ನಿರ್ಮಾಣಕ್ಕೆ ಶನಿವಾರ ಆರ್ಥಿಕ ಸಹಾಯದ ನೆರವು ನೀಡಿ ಅವರು ಮಾತನಾಡಿದರು.</p>.<p>‘ಧಾರ್ಮಿಕವಾಗಿ ಭಕ್ತಿ ಮಾರ್ಗದ ಮೂಲಕ ಶಕ್ತಿ ನೀಡಿ ಮನುಷ್ಯನ ಹೃದಯದಲ್ಲಿ ನೆಲೆಸಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ದೇಗುಲಗಳ ಮೂಲಕ ದೇವರು ನೆಮ್ಮದಿ ನೀಡಿದ್ದಾನೆ. ಈ ಗ್ರಾಮದಲ್ಲಿ ಮನೆಕೆಲಸ ಬಿಟ್ಟು ಸ್ವಂತ ಕೆಲಸದಂತೆ ಸುಂದರ ದೇಗುಲ ನಿರ್ಮಾಣಕ್ಕೆ ಕಾರಣವಾಗಿರುವ ಗ್ರಾಮಸ್ಥರು ಮಾದರಿಯಾಗಿದ್ದಾರೆ’ ಎಂದರು.</p>.<p>‘ಗ್ರಾಮಸ್ಥರು ಧಾರ್ಮಿಕ ಚಿಂತನೆಗಳ ಜತೆ ಗ್ರಾಮಾಭಿವೃದ್ಧಿಗೆ ಮುಂದಾಗಿ, ಚಿಂತನಾಶೀಲ ಬದುಕು ರೂಢಿಸಿಕೊಳ್ಳಿ. ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡುವ ಕಾಯಕಕ್ಕೆ ಮುಂದಾದರೆ ಬದುಕಿನಲ್ಲಿ ಸಾರ್ಥಕತೆಯ ಅರ್ಥ ಕಾಣಬಹುದು’ ಎಂದರು.</p>.<p>ಈಚೆಗೆ ಕೆರೆಗೆ ಕಾಲುಜಾರಿ ಬಿದ್ದು ಮೃತಪಟ್ಟ ಯುವಕ ಅರುಣಕುಮಾರ್ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.</p>.<p>ಮುಖಂಡರಾದ ಕೆಂಗಯ್ಯ, ಬಸಪ್ಪ, ಬಸವಯ್ಯ, ಶಂಕರಯ್ಯ, ಸುಖೇಂದ್ರ, ಪುಟ್ಟರಾಜು, ಮಹಾದೇವ, ಸ್ವಾಮಿ, ನಿಂಗರಾಜು, ಶಿವರಾಜು, ಸಣ್ಣಯ್ಯ, ಪಾಪಯ್ಯ, ದೊಡಣ್ಣ, ಗಂಜಿಗೆರೆ ಮಹೇಶ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>