ಬಗೆಹರಿದ ಗೊಂದಲ: ಚುನಾವಣೆಯಲ್ಲಿ ಭಾಗವಹಿಸಿದ್ದ ಸಚಿವ ನಾರಾಯಣಗೌಡ ಬೆಳಿಗ್ಗೆ ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿ ಅಧ್ಯಕ್ಷ ಸ್ಥಾನದ ಮೊದಲ 15 ತಿಂಗಳ ಅವಧಿಗೆ ಮಹಾದೇವಿ ನಂಜುಂಡ, ನಂತರದ 15 ತಿಂಗಳ ಅವಧಿಗೆ ನಟರಾಜ್ ಅವರಿಗೆ ಅಧಿಕಾರ ನೀಡಲು ತೀರ್ಮಾನಿಸಿದರು. ಇದರಿಂದ ಬಿಜೆಪಿಯಲ್ಲಿ ಇದ್ದ ಆಂತರಿಕ ಭಿನ್ನಮತ ಬಗೆಹರಿದಂತಾಯಿತು. ನಾಮಪತ್ರ ಸಲ್ಲಿಕೆ ನಂತರ ಸದಸ್ಯರು ಸಚಿವ ನಾರಾಯಣಗೌಡರೊಂದಿಗೆ ವಿಜಯೋತ್ಸವ ಆಚರಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.