ಗುರುವಾರ ಸಾದುಗೋನಹಳ್ಳಿ ಗ್ರಾಮದ ಮೈದಾನದಲ್ಲಿ ಬೆಂಬಲಿಗರ ಸಭೆ ಆಯೋಜಿಸಿದ್ದ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ 2 ಸಾವಿರಕ್ಕೂ ಹೆಚ್ಚು ಜನರಿಗೆ ಬಾಡೂಟ ಆಯೋಜನೆ ಮಾಡಿದ್ದರು. ಕ್ವಿಂಟನ್ಗಟ್ಟಲೆ ಮಾಂಸ ತಯಾರು ಮಾಡಲಾಗಿತ್ತು. ಕುರಿ, ಕೋಳಿ ಮಾಂಸವನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗಿತ್ತು. ರಾಗಿ ಮುದ್ದೆ, ಮೊಟ್ಟೆಯನ್ನು ಜನರು ಸವಿದರು.