<p><strong>ಪಾಂಡವಪುರ (ಮಂಡ್ಯ ಜಿಲ್ಲೆ)</strong>: ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ. </p><p>ಕೃಷ್ಣರಾಜ ಸಾಗರ ಜಲಾಶಯದ ಬೋರೆ ಆನಂದೂರು ಸಮೀಪದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇವಾಲಯ ಮೂರು ವರ್ಷಗಳ ಹಿಂದೆ 2023ರಲ್ಲಿ ಗೋಚರವಾಗಿತ್ತು.</p><p>ಕೆ.ಆರ್. ಸಾಗರ ಅಣೆಕಟ್ಟೆಯ ನಿರ್ಮಾಣ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆಯೇ ದೇವರ ಮೂರ್ತಿಯನ್ನು ಸ್ಥಳಾಂತರ ಮಾಡಲಾಗಿತ್ತು. ಉಳಿದಿದ್ದ ಗೋಪುರ ಮತ್ತು ದೇವಸ್ಥಾನ ಕಂಬಗಳು ಈಗ ಕಾಣಿಸಿಕೊಂಡಿವೆ.</p><p>ನಾರಾಯಣಸ್ವಾಮಿ ದೇಗುಲವು ಸುತ್ತಮುತ್ತಲಿನ ಹತ್ತು ಗ್ರಾಮಗಳ ಮನೆ ದೇವರಾಗಿದೆ. ಮಜ್ಜಿಗೆರ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಮೂಲ ದೇವರಾದ ನಾರಾಯಣಸ್ವಾಮಿ ದೇವರಿಗೆ ನಿತ್ಯ ಪೂಜೆಗಳು ನಡೆಯುತ್ತಿವೆ.</p><p>ಬೋರೆ ಆನಂದೂರು ಗ್ರಾಮದ ಬಳಿಯ ಕಗ್ಗಲಿ ಅರಣ್ಯ ವಲಯದ ಪಕ್ಕದ ಕೆ.ಆರ್. ಸಾಗರ ಹಿನ್ನೀರಿನ ಸಮೀಪದಲ್ಲಿ ಈರಣ್ಯ ಮತ್ತು ಸೂರಣ್ಣ ಎಂಬ ಎರಡು ದೇವರ ವಿಗ್ರಹಗಳು ಕಾಣ ಸಿಗುತ್ತಿವೆ. ಈ ಎರಡು ಕಲ್ಲುಗಳಲ್ಲಿ ಶಿವನ ಪೂಜೆ ಮಾಡುತ್ತಿರುವುದು ಮತ್ತು ವಿವಿಧ ಭಂಗಿಗಳಲ್ಲಿ ಕೆತ್ತನೆ ಕಂಡು ಬಂದಿದೆ. ಈ ಬಗ್ಗೆ ಹಳೆಗನ್ನಡದಲ್ಲಿ ಬರಹವಿದೆ. ಆದರೆ, ಸತತವಾಗಿ ಹಿನ್ನೀರಿನಲ್ಲಿ ಮುಳುಗಿರುವ ಕಾರಣ ಮಸುಕಾಗಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಂಡವಪುರ (ಮಂಡ್ಯ ಜಿಲ್ಲೆ)</strong>: ಕೆ.ಆರ್.ಎಸ್. ಅಣೆಕಟ್ಟೆಯ ನೀರಿನ ಮಟ್ಟ 88 ಅಡಿಗೆ ಇಳಿಕೆಯಾಗಿದ್ದು, ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇಗುಲ 3 ವರ್ಷಗಳ ನಂತರ ಸಂಪೂರ್ಣ ಗೋಚರವಾಗಿದೆ. </p><p>ಕೃಷ್ಣರಾಜ ಸಾಗರ ಜಲಾಶಯದ ಬೋರೆ ಆನಂದೂರು ಸಮೀಪದ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದ ನಾರಾಯಣಸ್ವಾಮಿ ದೇವಾಲಯ ಮೂರು ವರ್ಷಗಳ ಹಿಂದೆ 2023ರಲ್ಲಿ ಗೋಚರವಾಗಿತ್ತು.</p><p>ಕೆ.ಆರ್. ಸಾಗರ ಅಣೆಕಟ್ಟೆಯ ನಿರ್ಮಾಣ ಸಂದರ್ಭದಲ್ಲಿ ನೂರು ವರ್ಷಗಳ ಹಿಂದೆಯೇ ದೇವರ ಮೂರ್ತಿಯನ್ನು ಸ್ಥಳಾಂತರ ಮಾಡಲಾಗಿತ್ತು. ಉಳಿದಿದ್ದ ಗೋಪುರ ಮತ್ತು ದೇವಸ್ಥಾನ ಕಂಬಗಳು ಈಗ ಕಾಣಿಸಿಕೊಂಡಿವೆ.</p><p>ನಾರಾಯಣಸ್ವಾಮಿ ದೇಗುಲವು ಸುತ್ತಮುತ್ತಲಿನ ಹತ್ತು ಗ್ರಾಮಗಳ ಮನೆ ದೇವರಾಗಿದೆ. ಮಜ್ಜಿಗೆರ ಗ್ರಾಮದಲ್ಲಿ ದೇವಸ್ಥಾನ ನಿರ್ಮಾಣವಾಗಿದ್ದು, ಮೂಲ ದೇವರಾದ ನಾರಾಯಣಸ್ವಾಮಿ ದೇವರಿಗೆ ನಿತ್ಯ ಪೂಜೆಗಳು ನಡೆಯುತ್ತಿವೆ.</p><p>ಬೋರೆ ಆನಂದೂರು ಗ್ರಾಮದ ಬಳಿಯ ಕಗ್ಗಲಿ ಅರಣ್ಯ ವಲಯದ ಪಕ್ಕದ ಕೆ.ಆರ್. ಸಾಗರ ಹಿನ್ನೀರಿನ ಸಮೀಪದಲ್ಲಿ ಈರಣ್ಯ ಮತ್ತು ಸೂರಣ್ಣ ಎಂಬ ಎರಡು ದೇವರ ವಿಗ್ರಹಗಳು ಕಾಣ ಸಿಗುತ್ತಿವೆ. ಈ ಎರಡು ಕಲ್ಲುಗಳಲ್ಲಿ ಶಿವನ ಪೂಜೆ ಮಾಡುತ್ತಿರುವುದು ಮತ್ತು ವಿವಿಧ ಭಂಗಿಗಳಲ್ಲಿ ಕೆತ್ತನೆ ಕಂಡು ಬಂದಿದೆ. ಈ ಬಗ್ಗೆ ಹಳೆಗನ್ನಡದಲ್ಲಿ ಬರಹವಿದೆ. ಆದರೆ, ಸತತವಾಗಿ ಹಿನ್ನೀರಿನಲ್ಲಿ ಮುಳುಗಿರುವ ಕಾರಣ ಮಸುಕಾಗಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>