ಕೆಆರ್ಎಸ್ ಅಣೆಕಟ್ಟು ಇರುವ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಇಲ್ಲಿಯವರೆಗೆ ವರದಿಯಾಗಿರುವಂತೆ ಅತಿ ಹೆಚ್ಚು ಬೆಳೆ ನಷ್ಟವಾಗಿದೆ. 64 ಹೆಕ್ಟೇರ್ ಕಬ್ಬು, 18ಹೆಕ್ಟೇರ್ ಭತ್ತದ ಬೆಳೆ ಜಲಾವೃತವಾಗಿ ನಾಶವಾಗಿದೆ. ಮಳವಳ್ಳಿ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಾದ ಬೆಳಕವಾಡಿ, ಪುರಿಗಾಲಿ, ಉಲ್ಲಂಬಳ್ಳಿ ಗ್ರಾಮದ ರೈತರ 20 ಎಕರೆ ಭತ್ತ, ಜೋಳ ಸೇರಿದಂತೆ ವಿವಿಧ ಬೆಳೆಗಳು, 5ಎಕರೆ ತೋಟ ಪ್ರವಾಹಕ್ಕೆ ಸಿಕ್ಕಿ ಕೊಚ್ಚಿ ಹೋಗಿದೆ.