ಕೆ.ಆರ್.ಪೇಟೆ: ‘ಶೋಷಿತ ವರ್ಗಗಳ ನಾಯಕ ಎಸ್.ಬಂಗಾರಪ್ಪ ಅವರಿಗೆ ರಾಜಕೀಯವಾಗಿ ಮರುಜನ್ಮ ನೀಡಿದ ಬಿಜೆಪಿಯನ್ನು ಆರ್ಯ ಈಡಿಗ ಸಮಾಜದ ಬಂಧುಗಳು ಬೆಂಬಲಿಸ ಬೇಕು. ನಾರಾಯಣಗೌಡರಿಗೆ ಮತ ನೀಡಬೇಕು’ ಎಂದು ಶಾಸಕ ಕುಮಾರ್ ಬಂಗಾರಪ್ಪ ಮನವಿ ಮಾಡಿದರು.
ಪಟ್ಟಣದ ರಾಮದಾಸ್ ಹೋಟೆಲ್ ಸಭಾಂಗಣದಲ್ಲಿ ನಡೆದ ಶೋಷಿತ ವರ್ಗಗಳ ಜನರು ಹಾಗೂ ಆರ್ಯ ಈಡಿಗ ಜನಾಂಗದವರ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳಿಗೆ ಯಡಿಯೂರಪ್ಪನವರು ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರು ಒಂದು ಜಾತಿಗೆ ಸೀಮಿತವಾಗದೇ ಹಿಂದುಳಿದ ವರ್ಗ ಮತ್ತು ದಲಿತರ ಪರವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರ ಕೈಬಲಪಡಿಸಬೇಕು. ಎಲ್ಲಾ ಜಾತಿ ಹಾಗೂ ವರ್ಗದ ಜನರು ನಾರಾಯಣಗೌಡರನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ವರನಟ ಡಾ.ರಾಜಕುಮಾರ್ ಮತ್ತು ಎಸ್.ಬಂಗಾರಪ್ಪ ಅವರು ಆರ್ಯ ಈಡಿಗ ಸಮಾಜದ ಎರಡು ರತ್ನಗಳು ಎಂದು ಬಣ್ಣಿಸಿದರು.
ಮಂಡ್ಯ ನಗರಸಭೆ ಮಾಜಿ ಅಧ್ಯಕ್ಷ ಅರುಣ್ ಕುಮಾರ್, ಅಣ್ಣಯ್ಯ, ನಂಜುಂಡ, ಪ್ರಕಾಶ್, ಮಹೇಶ್, ನಾರಾಯಣಸ್ವಾಮಿ ಇದ್ದರು.