ಬೆಳಕವಾಡಿ ಗ್ರಾಮದ ಶ್ರೀನಿವಾಸ ಅವರ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಗುರುವಾರ ರಾತ್ರಿ 10.30ರ ವೇಳೆಯಲ್ಲಿ ಚಿರತೆ ಮನೆಯೊಳಗೆ ಪ್ರವೇಶಿಸಿದೆ. ಅದೇ ವೇಳೆ ತೋಟಕ್ಕೆ ಬಂದ ಇಬ್ಬರು ಯುವಕರು ಮನೆಯೊಳಗೆ ಚಿರತೆ ಘರ್ಜಿಸುತ್ತಿರುವುದನ್ನು ಗುರುತಿಸಿದ್ದಾರೆ. ಧೈರ್ಯ ಮಾಡಿ ಮನೆಯ ಸಮೀಪಕ್ಕೆ ಬಂದ ಯುವಕರು ಬಾಗಿಲು ಮುಚ್ಚಿ, ಹೊರಗಿನಿಂದ ಚಿಲಕ ಹಾಕಿಕೊಂಡಿದ್ದಾರೆ.