ಕಬ್ಬು ಬೆಳೆದಿದ್ದ ತಮ್ಮ ಜಮೀನಿನಲ್ಲಿ ಅವರ ಕುಟುಂಬ ವರ್ಗದವರು ಕೆಲಸ ಮಾಡುತ್ತಿದ್ದರು. ಚಿರತೆಯು ಜಮೀನಿನಲ್ಲಿ ನುಸುಳಿಕೊಂಡು ಓಡಿ ಹೋಗುವಾಗ ಹತ್ತಿರದಲ್ಲೇ ಇದ್ದ ಮನೆಯವರ ಬಳಿ ಧಾವಿಸಿದೆ. ಇದನ್ನು ಕಂಡು ದರ್ಶನ್ ಚಿರತೆ ಓಡಿಸಲು ಮುಂದಾಗಿದ್ದಾರೆ. ಚಿರತೆ ಕೂಡಲೇ ಅವರ ಮೇಲೆ ಎಗರಿ ಪರಿಚಿ ಓಡಿ ಹೋಗಿದೆ. ಪರಿಣಾಮ ಹೊಟ್ಟೆ, ಕೈ ಕಾಲುಗಳಿಗೆ ಗಾಯಗಳಾಗಿವೆ.