ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳೇನಹಳ್ಳಿ: ರೈತನ ಮೇಲೆ ಚಿರತೆ ದಾಳಿ, ಗಾಯ

Last Updated 1 ಮಾರ್ಚ್ 2021, 5:45 IST
ಅಕ್ಷರ ಗಾತ್ರ

ಕಿಕ್ಕೇರಿ: ಹೋಬಳಿಯ ಕಾಳೇನಹಳ್ಳಿ ಗ್ರಾಮದ ರೈತನ ಮೇಲೆ ಚಿರತೆಯೊಂದು ಭಾನುವಾರ ಸಂಜೆ ದಾಳಿ ಮಾಡಿದೆ.

ಗ್ರಾಮದ ಗೂಡೆಹೊಸಹಳ್ಳಿ ಶಿವೇಗೌಡರ ಪುತ್ರ ದರ್ಶನ್ ಚಿರತೆ ದಾಳಿಗೆ ಒಳಗಾದವರು.

ಕಬ್ಬು ಬೆಳೆದಿದ್ದ ತಮ್ಮ ಜಮೀನಿನಲ್ಲಿ ಅವರ ಕುಟುಂಬ ವರ್ಗದವರು ಕೆಲಸ ಮಾಡುತ್ತಿದ್ದರು. ಚಿರತೆಯು ಜಮೀನಿನಲ್ಲಿ ನುಸುಳಿಕೊಂಡು ಓಡಿ ಹೋಗುವಾಗ ಹತ್ತಿರದಲ್ಲೇ ಇದ್ದ ಮನೆಯವರ ಬಳಿ ಧಾವಿಸಿದೆ. ಇದನ್ನು ಕಂಡು ದರ್ಶನ್ ಚಿರತೆ ಓಡಿಸಲು ಮುಂದಾಗಿದ್ದಾರೆ. ಚಿರತೆ ಕೂಡಲೇ ಅವರ ಮೇಲೆ ಎಗರಿ ಪರಿಚಿ ಓಡಿ ಹೋಗಿದೆ. ಪರಿಣಾಮ ಹೊಟ್ಟೆ, ಕೈ ಕಾಲುಗಳಿಗೆ ಗಾಯಗಳಾಗಿವೆ.

ಕಿಕ್ಕೇರಿ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಲಾಗಿದ್ದು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ.

ಜಾನುವಾರುಗಳು, ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ರೈತರ ಮೇಲೆ ದಾಳಿ ಮಾಡಲಾರಂಭಿಸಿರುವುದರಿಂದ ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT