ಮರೀಗೌಡರ ಮಗ ಮಾಯಪ್ಪ (37) ಮೃತದೇಹ ಕೊಳೆತ ಸ್ಥಿತಿಯಲ್ಲಿ ಜಮೀನಿನ ಪಕ್ಕದ ಗುಡ್ಡದ ಬಳಿ ಈಚೆಗೆ ಪತ್ತೆಯಾಗಿತ್ತು. ಕೃಷಿಯ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ ಅವರು ಕಳೆದೊಂದು ವಾರದಿಂದ ಮನೆಗೆ ಬಂದಿರಲಿಲ್ಲ. ಕೆಲಸಕ್ಕೆ ತೆರಳಿರಬಹುದು ಎಂದು ಮನೆಯವರು ಭಾವಿಸಿದ್ದರು. ಸರ್ವೆ 31ರ ಗುಡ್ಡದ ಬಳಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದು ಮಾಯಪ್ಪ ಅವರ ಮೃತದೇಹ ಎಂದು ಅವರ ಪತ್ನಿ ರೇಖಾ ಹಾಗೂ ಕುಟುಂಬಸ್ಥರು ಗುರುತಿಸಿದರು.