ಶ್ರೀರಂಗಪಟ್ಟಣ: ತಾಲ್ಲೂಕಿನ ಆಲಗೂಡು ಗ್ರಾಮದ ಬಳಿ,ಕೃಷ್ಣೇಗೌಡ ಎಂಬುವವರ ಕಬ್ಬಿನ ಗದ್ದೆಯಲ್ಲಿ ಶನಿವಾರ ಮೂರು ಚಿರತೆ ಮರಿಗಳು ಕಾಣಿಸಿಕೊಂಡಿವೆ.
ಕಬ್ಬು ಕಡಿಯುವ ವೇಳೆ, ಇನ್ನೂ ಕಣ್ಣು ಬಿಡದ ಚಿರತೆ ಮರಿಗಳು ಸಿಕ್ಕಿವೆ. ಕುತೂಹದಿಂದ ಜನರು ಚಿರತೆ ಮರಿಗಳನ್ನು ಮುಟ್ಟಿ ಪುಳಕಿತರಾದರು. ಕೆಲವರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು.
‘ಏಳೆಂಟು ದಿನಗಳ ಈಚೆಗೆ ಜನಿಸಿರುವ ಮರಿಗಳಿವು. ಜನರು ಸೇರಿದ್ದರಿಂದ ಗಾಬರಿಗೊಂಡಿವೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವು ಕಂಡುಬಂದಿದ್ದ ಸ್ಥಳದಲ್ಲೇ ಬಿಡುವಂತೆ ಸೂಚಿಸಿದ್ದು, ಅದರಂತೆ ಕ್ರಮಕೈಗೊಂಡಿದ್ದೇವೆ ’ ಎಂದು ಉಪ ವಲಯ ಅರಣ್ಯಾಧಿಕಾರಿ ಆನಂದೇಗೌಡ ಪ್ರತಿಕ್ರಿಯಿಸಿದರು.