ಈ ಊರಿನಲ್ಲಿ ಯಳವರು ಮತ್ತು ಉಪ್ಪಾರರ 50ಕ್ಕೂ ಹೆಚ್ಚು ಕುಟುಂಬಗಳಿವೆ. ಕೃಷಿ ಭೂಮಿ ಇಲ್ಲದ ಇವರು ನಿತ್ಯದ ದುಡಿಮೆಯನ್ನೇ ನೆಚ್ಚಿ ಬದುಕುವವರು. ಸದ್ಯ ಯಾರೂ ಇವರನ್ನು ಕೆಲಸಕ್ಕೆ ಕರೆಯುತ್ತಿಲ್ಲ. ಊರಿನಿಂದ ಹೊರಗೆ ಹೋಗಲು ಅವಕಾಶವೂ ಇಲ್ಲ. ಈ ಪುಟ್ಟ ಗ್ರಾಮದಲ್ಲಿ ದಿನ ಬಳಕೆಯ ವಸ್ತುಗಳು ಕೂಡ ಸಿಗದೆ ಪರದಾಟ ಶುರುವಾಗಿದೆ. ಆಸ್ಪತ್ರೆ, ಊಟ, ಬಟ್ಟೆ, ಮಕ್ಕಳ ಶಾಲೆ, ಮದುವೆಗೆ ಮಾಡಿದ ಸಾಲದ ಕಂತು ದಿನದಿಂದ ದಿನಕ್ಕೆ ದಪ್ಪವಾಗುತ್ತಿದೆ.