<p><strong>ಕೆ.ಆರ್. ಪೇಟೆ (ಮಂಡ್ಯ ಜಿಲ್ಲೆ):</strong> ದೂರು ಸಲ್ಲಿಸಿ ಎರಡು ವರ್ಷಗಳಾದರೂ ಕ್ರಮವಹಿಸದ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಕಡತಕ್ಕೆ ಪ್ರತಿದಿನ ಪೂಜೆ ಮಾಡಿ ಎಂದು ಗಂಧದ ಕಡ್ಡಿಯ ಪ್ಯಾಕೆಟ್ ಅನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಕಳುಹಿಸಿಕೊಟ್ಟಿದ್ದಾರೆ. </p>.<p>ಪಟ್ಟಣದ ಎಚ್.ಬಿ. ಮಂಜುನಾಥ್ ಅವರಿಗೆ ‘ಅರ್ಜಿಯನ್ನು ಕಡತದಲ್ಲಿ ಇಟ್ಟುಕೊಂಡಿದ್ದೇವೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಹಿಂಬರಹ ನೀಡಿದ್ದರು. ಇದರಿಂದ ಬೇಸತ್ತು ಗಂಧದ ಕಡ್ಡಿಯನ್ನು ಕಳುಹಿಸಿದ್ದಾರೆ. </p>.<p>ಕೆ.ಆರ್. ಪೇಟೆಯ ಖಾಸಿಂಖಾನ್ ಸಮುದಾಯ ಭವನ ಆವರಣದಲ್ಲಿ ಹೆಚ್ಚುವರಿ ಹಾಲ್ ನಿರ್ಮಿಸದೆ, ₹50 ಲಕ್ಷವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 2022ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೆ.ಆರ್.ಪೇಟೆ ಮೂಲದವರಾದ ಕೆ.ರೆಹಮಾನ್ ಖಾನ್ ಅವರ ರಾಜ್ಯಸಭಾ ಸದಸ್ಯರ ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿತ್ತು. </p>.<p>ಈ ಸಂಬಂಧ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಿಂದ ಬಂದಿದ್ದ ಎಂಜಿನಿಯರ್, ‘ಹಳೆಯ ಕಟ್ಟಡವನ್ನು ದುರಸ್ತಿ ಮಾಡಲಾಗಿದೆ’ ಎಂದು ವರದಿ ನೀಡಿದ್ದರು. ಸೂಕ್ತ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ಮತ್ತೊಂದು ದೂರನ್ನು ಮಂಜುನಾಥ್ ನೀಡಿದ್ದರು. </p>.<p>ತನಿಖೆ ವಿವರ ಕೋರಿ ಮಂಜುನಾಥ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ‘ಅರ್ಜಿ ಕಡತದಲ್ಲಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಹಿಂಬರಹ ನೀಡಿದ್ದರು. ಇದರಿಂದ ಬೇಸರಗೊಂಡ ಮಂಜುನಾಥ್, ಈ ವಿಳಂಬ ಧೋರಣೆ ಸರಿಯೇ? ಎಂದು ಗಂಧದ ಕಡ್ಡಿ ಕಳುಹಿಸುವ ಮೂಲಕ ವಿನೂತನವಾಗಿ ಆಕ್ರೋಶ ಹೊರಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆ.ಆರ್. ಪೇಟೆ (ಮಂಡ್ಯ ಜಿಲ್ಲೆ):</strong> ದೂರು ಸಲ್ಲಿಸಿ ಎರಡು ವರ್ಷಗಳಾದರೂ ಕ್ರಮವಹಿಸದ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ, ಕಡತಕ್ಕೆ ಪ್ರತಿದಿನ ಪೂಜೆ ಮಾಡಿ ಎಂದು ಗಂಧದ ಕಡ್ಡಿಯ ಪ್ಯಾಕೆಟ್ ಅನ್ನು ಸಾಮಾಜಿಕ ಕಾರ್ಯಕರ್ತರೊಬ್ಬರು ಕಳುಹಿಸಿಕೊಟ್ಟಿದ್ದಾರೆ. </p>.<p>ಪಟ್ಟಣದ ಎಚ್.ಬಿ. ಮಂಜುನಾಥ್ ಅವರಿಗೆ ‘ಅರ್ಜಿಯನ್ನು ಕಡತದಲ್ಲಿ ಇಟ್ಟುಕೊಂಡಿದ್ದೇವೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಹಿಂಬರಹ ನೀಡಿದ್ದರು. ಇದರಿಂದ ಬೇಸತ್ತು ಗಂಧದ ಕಡ್ಡಿಯನ್ನು ಕಳುಹಿಸಿದ್ದಾರೆ. </p>.<p>ಕೆ.ಆರ್. ಪೇಟೆಯ ಖಾಸಿಂಖಾನ್ ಸಮುದಾಯ ಭವನ ಆವರಣದಲ್ಲಿ ಹೆಚ್ಚುವರಿ ಹಾಲ್ ನಿರ್ಮಿಸದೆ, ₹50 ಲಕ್ಷವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ 2022ರಲ್ಲಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಕೆ.ಆರ್.ಪೇಟೆ ಮೂಲದವರಾದ ಕೆ.ರೆಹಮಾನ್ ಖಾನ್ ಅವರ ರಾಜ್ಯಸಭಾ ಸದಸ್ಯರ ನಿಧಿಯಿಂದ ಹಣ ಬಿಡುಗಡೆ ಮಾಡಲಾಗಿತ್ತು. </p>.<p>ಈ ಸಂಬಂಧ ತನಿಖೆಗಾಗಿ ಲೋಕಾಯುಕ್ತ ಸಂಸ್ಥೆಯಿಂದ ಬಂದಿದ್ದ ಎಂಜಿನಿಯರ್, ‘ಹಳೆಯ ಕಟ್ಟಡವನ್ನು ದುರಸ್ತಿ ಮಾಡಲಾಗಿದೆ’ ಎಂದು ವರದಿ ನೀಡಿದ್ದರು. ಸೂಕ್ತ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ಮತ್ತೊಂದು ದೂರನ್ನು ಮಂಜುನಾಥ್ ನೀಡಿದ್ದರು. </p>.<p>ತನಿಖೆ ವಿವರ ಕೋರಿ ಮಂಜುನಾಥ್ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ‘ಅರ್ಜಿ ಕಡತದಲ್ಲಿದೆ’ ಎಂದು ಲೋಕಾಯುಕ್ತ ಅಧಿಕಾರಿಗಳು ಹಿಂಬರಹ ನೀಡಿದ್ದರು. ಇದರಿಂದ ಬೇಸರಗೊಂಡ ಮಂಜುನಾಥ್, ಈ ವಿಳಂಬ ಧೋರಣೆ ಸರಿಯೇ? ಎಂದು ಗಂಧದ ಕಡ್ಡಿ ಕಳುಹಿಸುವ ಮೂಲಕ ವಿನೂತನವಾಗಿ ಆಕ್ರೋಶ ಹೊರಹಾಕಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>