<p><strong>ಮಂಡ್ಯ</strong>: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್. ಸತೀಶ್ ಅವರ ಮನೆ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕಿಂತ ₹3.01 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. </p><p>ಸರ್ಕಾರಿ ಅಧಿಕಾರಿಯಾಗಿ ಇದುವರೆಗಿನ ಸತೀಶ್ ಅವರ ಒಟ್ಟು ಆದಾಯ ₹1.45 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಸ್ಥಿರಾಸ್ತಿ ₹2.19 ಕೋಟಿ ಮತ್ತು ಚರಾಸ್ತಿ ₹2.26 ಕೋಟಿ ಸೇರಿದಂತೆ ಒಟ್ಟು ₹4.46 ಕೋಟಿ ಆಸ್ತಿ ಹೊಂದಿರುವುದು ತನಿಖೆಯಿಂದ ಬಯಲಾಗಿದೆ.</p><p>ಲೋಕಾಯುಕ್ತ ಪೊಲೀಸರು ಸತೀಶ್ ಅವರಿಗೆ ಸೇರಿದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು. ₹97 ಲಕ್ಷ ಮೌಲ್ಯದ 3 ನಿವೇಶನಗಳು, ₹1.06 ಕೋಟಿ ಮೌಲ್ಯದ 2 ಮನೆಗಳು, ₹16 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. </p><p>ಮನೆಯಲ್ಲಿ ₹6.70 ಲಕ್ಷ ನಗದು, ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆ, ಎಫ್ಡಿ, ಲ್ಯಾಂಡ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ₹1.77 ಕೋಟಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಪತ್ತೆ ಮಾಡಿದ್ದಾರೆ. ಕಾವೇರಿ ಸತ್ವದಲ್ಲಿ 2 ನಿವೇಶನಗಳು, ಬಿಡದಿಯಲ್ಲಿ 1 ಪ್ಲಾಟ್ ಇರುವುದನ್ನು ಗುರುತಿಸಿದ್ದಾರೆ. </p><p>‘ಕಾನೂನುಬದ್ಧ ಆದಾಯ ಮೂಲವನ್ನು ತೋರಿಸಲು ಕಾಲಾವಾಕಾಶ ನೀಡಲಾಗುವುದು. ಕಾರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ಕಂಡು ಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ) ಎಸ್. ಸತೀಶ್ ಅವರ ಮನೆ ಮೇಲೆ ಗುರುವಾರ ಲೋಕಾಯುಕ್ತ ದಾಳಿ ನಡೆದಿದ್ದು, ಆದಾಯಕ್ಕಿಂತ ₹3.01 ಕೋಟಿ ಅಕ್ರಮ ಆಸ್ತಿ ಗಳಿಸಿರುವುದು ಪತ್ತೆಯಾಗಿದೆ. </p><p>ಸರ್ಕಾರಿ ಅಧಿಕಾರಿಯಾಗಿ ಇದುವರೆಗಿನ ಸತೀಶ್ ಅವರ ಒಟ್ಟು ಆದಾಯ ₹1.45 ಕೋಟಿ ಎಂದು ಅಂದಾಜಿಸಲಾಗಿದೆ. ಆದರೆ, ಸ್ಥಿರಾಸ್ತಿ ₹2.19 ಕೋಟಿ ಮತ್ತು ಚರಾಸ್ತಿ ₹2.26 ಕೋಟಿ ಸೇರಿದಂತೆ ಒಟ್ಟು ₹4.46 ಕೋಟಿ ಆಸ್ತಿ ಹೊಂದಿರುವುದು ತನಿಖೆಯಿಂದ ಬಯಲಾಗಿದೆ.</p><p>ಲೋಕಾಯುಕ್ತ ಪೊಲೀಸರು ಸತೀಶ್ ಅವರಿಗೆ ಸೇರಿದ ಮನೆ, ಕಚೇರಿ ಮತ್ತು ಮಾವನ ಮನೆ ಸೇರಿದಂತೆ ನಾಲ್ಕು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು. ₹97 ಲಕ್ಷ ಮೌಲ್ಯದ 3 ನಿವೇಶನಗಳು, ₹1.06 ಕೋಟಿ ಮೌಲ್ಯದ 2 ಮನೆಗಳು, ₹16 ಲಕ್ಷ ಮೌಲ್ಯದ 6 ಎಕರೆ ಕೃಷಿ ಜಮೀನು ಪತ್ತೆಯಾಗಿದೆ. </p><p>ಮನೆಯಲ್ಲಿ ₹6.70 ಲಕ್ಷ ನಗದು, ₹20 ಲಕ್ಷ ಮೌಲ್ಯದ ಚಿನ್ನಾಭರಣ, ₹23 ಲಕ್ಷ ಮೌಲ್ಯದ ಕಾರು, ಬ್ಯಾಂಕ್ ಖಾತೆ, ಎಫ್ಡಿ, ಲ್ಯಾಂಡ್ ಡೆವಲಪ್ಮೆಂಟ್ಗೆ ಸಂಬಂಧಿಸಿದ ₹1.77 ಕೋಟಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ವೇಳೆ ಪತ್ತೆ ಮಾಡಿದ್ದಾರೆ. ಕಾವೇರಿ ಸತ್ವದಲ್ಲಿ 2 ನಿವೇಶನಗಳು, ಬಿಡದಿಯಲ್ಲಿ 1 ಪ್ಲಾಟ್ ಇರುವುದನ್ನು ಗುರುತಿಸಿದ್ದಾರೆ. </p><p>‘ಕಾನೂನುಬದ್ಧ ಆದಾಯ ಮೂಲವನ್ನು ತೋರಿಸಲು ಕಾಲಾವಾಕಾಶ ನೀಡಲಾಗುವುದು. ಕಾರು ಬೇನಾಮಿ ಹೆಸರಿನಲ್ಲಿ ಖರೀದಿಸಿರುವುದು ಕಂಡು ಬಂದಿದೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಎಸ್ಪಿ ಸುರೇಶ್ ಬಾಬು ಮಾಹಿತಿ ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>