ಕಿಕ್ಕೇರಿ: ಸಮೀಪದ ಗಾಂಧಿನಗರದ ಬಳಿ ಭಾನುವಾರ ಸಂಜೆ ಲಾರಿ ಮಗುಚಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ವ್ಯಕ್ತಿಗೆ ಗಾಯಗಳಾಗಿವೆ.
ಹೋಬಳಿಯ ಗಂಗೇನಹಳ್ಳಿ ಗ್ರಾಮದ ಪವನ್ (23) ಮೃತ ಚಾಲಕ.
ಕೆ.ಆರ್.ಪೇಟೆ ಕಡೆಯಿಂದ ಖಾಲಿ ಲಾರಿಯನ್ನು ಗ್ರಾಮಕ್ಕೆ ತೆಗೆದುಕೊಂಡು ಹೋಗುವಾಗ ಅವಘಡವಾಗಿದೆ. ಜತೆಯಲ್ಲಿದ್ದ ಸ್ನೇಹಿತ ಉಮೇಶ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೆ.ಆರ್.ಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಕಿಕ್ಕೇರಿ ಠಾಣೆ ಪಿಎಸ್ಐ ನವೀನ್ ಭೇಟಿ ನೀಡಿ ಪರಿಶೀಲಿಸಿದರು.