ಸೋಮವಾರ, 11 ಮೇ 2026
×
ADVERTISEMENT

ಮದ್ದೂರು: ದನಗಳ ಜಾತ್ರೆ ಆರಂಭ

Published : 27 ಏಪ್ರಿಲ್ 2026, 0:03 IST
Last Updated : 27 ಏಪ್ರಿಲ್ 2026, 6:58 IST
ADVERTISEMENT
ಫಾಲೋ ಮಾಡಿ
Comments
ಪ್ರಥಮ ಬಹುಮಾನ ₹2 ಲಕ್ಷ
ಈ ಬಾರಿ ಶಾಸಕ ಕೆ.ಎಂ ಉದಯ್ ಅವರು ತಮ್ಮ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿರುವ ‘ಮದ್ದೂರು ಉತ್ಸವ’ದ ಭಾಗವಾಗಿ ಭಾರಿ ದನಗಳ ಜಾತ್ರೆಯಲ್ಲಿ ಭಾಗವಹಿಸುವ ಉತ್ತಮ ರಾಸುಗಳಿಗೆ ಮೊದಲನೇ ಚಾoಪಿಯನ್‌ಗೆ ₹2 ಲಕ್ಷ, ಎರಡನೇ ಚಾoಪಿಯನ್‌ಗೆ ₹1 ಲಕ್ಷ, ಮೂರನೇ ಚಾoಪಿಯನ್‌ಗೆ ₹50 ಸಾವಿರ ಸೇರಿದಂತೆ 10 ರಾಸುಗಳಿಗೆ ₹10 ಸಾವಿರ ರೂಪಾಯಿ ಸಮಾಧಾನಕರ ಬಹುಮಾನವನ್ನು ನೀಡುತ್ತಿದೆ. ಆದ್ದರಿಂದ ಈ ಬಾರಿಯ ದನಗಳ ಜಾತ್ರೆಯಲ್ಲಿ ರಾಸುಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಅಷ್ಟೇ ಅಲ್ಲದೇ ದನಗಳ ಜಾತ್ರೆಯಲ್ಲಿ ಪಾಲ್ಗೊಳ್ಳುವ ರಾಸುಗಳ ಸುಂಕವನ್ನೂ ಟ್ರಸ್ಟ್ ವತಿಯಿಂದಲೇ ಭರಿಸಲಾಗುತ್ತಿದೆ.
‘ತಂಗಲು ವ್ಯವಸ್ಥೆ ಮಾಡಿ’
ಮದ್ದೂರಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿವರ್ಷದಂತೆ ನಡೆಯುವ ಭಾರಿ ದನಗಳ ಜಾತ್ರೆಯು ಆರಂಭ ಆಗಿದೆ. ತಾಲ್ಲೂಕು ಆಡಳಿತ ಹಾಗೂ ಸ್ಥಳೀಯ ನಗರಸಭೆಯಿಂದ ಹಲವು ಕಡೆಗಳಿಂದ ಬರುವ ರಾಸುಗಳು ಸೇರಿದಂತೆ ರೈತರು ತಂಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಬೇಸಿಗೆಯ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತಾರೆ ಸ್ಥಳೀಯರಾದ ಮ.ನ. ಪ್ರಸನ್ನ ಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT