<p>ಮಳವಳ್ಳಿ: ‘ಮನುಷ್ಯರು ಪ್ರಸ್ತುತ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾನೂನು ರೂಪಿಸುತ್ತಿರುವ ಸಚಿವಾಲಯಗಳೇ ಕಾರಣವಾಗಿವೆ’ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.</p>.<p>ತಾಲ್ಲೂಕಿನ ಬುಗತಗಹಳ್ಳಿಯಲ್ಲಿ ಮದನ್ ಮೋಹನ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಿಪಿಐ(ಎಂ) ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಹುಟ್ಟಿನಿಂದ ಸಾಯುವವರೆಗಿನ ಬವಣೆ, ಸಂಕಟಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕು. ಅದಕ್ಕಾಗಿ ಜನರು ವೈಜ್ಞಾನಿಕವಾಗಿ ಯೋಚಿಸಬೇಕು. ಮನುಷ್ಯರ ಕಷ್ಟಗಳಿಗೆ ಪರಿಹಾರ ದೇವಾಲಯದಲ್ಲಿ ಸಿಗುವುದಿಲ್ಲ, ನಾವು ಪಾದಯಾತ್ರೆ ಹೋಗಬೇಕಾಗಿರುವುದು ದೇವಾಲಯಕ್ಕೆ ಅಲ್ಲ ಬದಲಾಗಿ ಸಚಿವಾಲಯಕ್ಕೆ’ ಎಂದು ಹೇಳಿದರು.</p>.<p>‘ದುಡಿಯುವ ವರ್ಗದ ಶ್ರಮಕ್ಕೆ ತಕ್ಕಂತೆ ಬೆಲೆ ಅಂದರೆ ಕೂಲಿ ನೀಡದೆ ಆಳುವ ವರ್ಗ ಇವರ ಬಡತನಕ್ಕೆ ದೇವರು ಕಾರಣ ಎಂದು ನಂಬಿಸಿದ್ದಾರೆ. ಆದ್ದರಿಂದ ಇಂತಹ ಮೂಡ ನಂಬಿಕೆಗಳ ವಿರುದ್ಧ ಹೋರಾಡಲು ಇಂತಹ ಶಿಬಿರ ಸಹಾಯಕವಾಗಿದೆ ’ ಎಂದರು.</p>.<p>ರಾಜ್ಯ ಮುಖಂಡ ಎನ್.ಕೆ.ವಸಂತರಾಜ್, ‘ಅಧ್ಯಯನ ಶಿಬಿರಗಳ ಮೂಲಕ ಹೋರಾಟದ ರೂಪುರೇಷೆಗಳನ್ನು ರಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ನಮ್ಮನ್ನು ಆಳುವ ವರ್ಗವನ್ನು ಎಚ್ಚರಿಸುವ ಕೆಲಸ ಹೋರಾಟದಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.</p>.<p>ರಾಜ್ಯ ಮುಖಂಡ ವಿಜಯ್ ಕುಮಾರ್, ಜಿಲ್ಲಾ ಮುಖಂಡರಾದ ಎನ್.ಎಲ್.ಭರತ್ರಾಜ್, ಸಿ.ಕುಮಾರಿ, ಬಿ.ಹನುಮೇಶ ಮತ್ತು ಎನ್.ಲಿಂಗರಾಜಮೂರ್ತಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-40-127849221</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಳವಳ್ಳಿ: ‘ಮನುಷ್ಯರು ಪ್ರಸ್ತುತ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಕಾನೂನು ರೂಪಿಸುತ್ತಿರುವ ಸಚಿವಾಲಯಗಳೇ ಕಾರಣವಾಗಿವೆ’ಎಂದು ಸಿಪಿಐ(ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ ತಿಳಿಸಿದರು.</p>.<p>ತಾಲ್ಲೂಕಿನ ಬುಗತಗಹಳ್ಳಿಯಲ್ಲಿ ಮದನ್ ಮೋಹನ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಿಪಿಐ(ಎಂ) ಪಕ್ಷದ ಜಿಲ್ಲಾ ಮಟ್ಟದ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.</p>.<p>‘ಮನುಷ್ಯ ಹುಟ್ಟಿನಿಂದ ಸಾಯುವವರೆಗಿನ ಬವಣೆ, ಸಂಕಟಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಯಬೇಕು. ಅದಕ್ಕಾಗಿ ಜನರು ವೈಜ್ಞಾನಿಕವಾಗಿ ಯೋಚಿಸಬೇಕು. ಮನುಷ್ಯರ ಕಷ್ಟಗಳಿಗೆ ಪರಿಹಾರ ದೇವಾಲಯದಲ್ಲಿ ಸಿಗುವುದಿಲ್ಲ, ನಾವು ಪಾದಯಾತ್ರೆ ಹೋಗಬೇಕಾಗಿರುವುದು ದೇವಾಲಯಕ್ಕೆ ಅಲ್ಲ ಬದಲಾಗಿ ಸಚಿವಾಲಯಕ್ಕೆ’ ಎಂದು ಹೇಳಿದರು.</p>.<p>‘ದುಡಿಯುವ ವರ್ಗದ ಶ್ರಮಕ್ಕೆ ತಕ್ಕಂತೆ ಬೆಲೆ ಅಂದರೆ ಕೂಲಿ ನೀಡದೆ ಆಳುವ ವರ್ಗ ಇವರ ಬಡತನಕ್ಕೆ ದೇವರು ಕಾರಣ ಎಂದು ನಂಬಿಸಿದ್ದಾರೆ. ಆದ್ದರಿಂದ ಇಂತಹ ಮೂಡ ನಂಬಿಕೆಗಳ ವಿರುದ್ಧ ಹೋರಾಡಲು ಇಂತಹ ಶಿಬಿರ ಸಹಾಯಕವಾಗಿದೆ ’ ಎಂದರು.</p>.<p>ರಾಜ್ಯ ಮುಖಂಡ ಎನ್.ಕೆ.ವಸಂತರಾಜ್, ‘ಅಧ್ಯಯನ ಶಿಬಿರಗಳ ಮೂಲಕ ಹೋರಾಟದ ರೂಪುರೇಷೆಗಳನ್ನು ರಚಿಸಿ ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಮಾಡುವ ಉದ್ದೇಶ ಹೊಂದಲಾಗಿದೆ. ನಮ್ಮನ್ನು ಆಳುವ ವರ್ಗವನ್ನು ಎಚ್ಚರಿಸುವ ಕೆಲಸ ಹೋರಾಟದಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.</p>.<p>ರಾಜ್ಯ ಮುಖಂಡ ವಿಜಯ್ ಕುಮಾರ್, ಜಿಲ್ಲಾ ಮುಖಂಡರಾದ ಎನ್.ಎಲ್.ಭರತ್ರಾಜ್, ಸಿ.ಕುಮಾರಿ, ಬಿ.ಹನುಮೇಶ ಮತ್ತು ಎನ್.ಲಿಂಗರಾಜಮೂರ್ತಿ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260523-40-127849221</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>