<p>ಕಿಕ್ಕೇರಿ: ಪ್ರತಿ ವರ್ಷ ಬೇಸಿಗೆ ಬಂತೆಂದರೆ ಪ್ರಾಣಿ ಪಕ್ಷಿಗಳಿಗೆ ಜೀವಗುಟುಕಾದ ಕೆರೆ ಮತ್ತು ಹಳ್ಳ– ಕೊಳ್ಳದ ನೀರನ್ನು ಕೆಲವರು ಅಕ್ರಮವಾಗಿ ಬಸಿಯುತ್ತಿದ್ದಾರೆ. ಇದರಿಂದ ಜಲಮೂಲಗಳು ಒಣಗುತ್ತಿವೆ ಎಂಬುದು ಪರಿಸರ ಪ್ರೇಮಿಗಳ ದೂರು.</p>.<p>ಬೇಸಿಗೆಯ ತಾಪಮಾನಕ್ಕೆ ಬಾಯಾರಿಕೆ ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಕೆರೆ ಕಟ್ಟೆಗಳ ನೀರನ್ನು ಅವಲಂಬಿಸಿವೆ. ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಕೆರೆ ಸುಮಾರು 25 ಎಕರೆ ವಿಸ್ತಾರವನ್ನು ಹೊಂದಿದೆ. ಕಾಟಾಚಾರಕ್ಕೆ ಹೂಳು ತೆಗೆದಿರುವುದರಿಂದ ಅಲ್ಪ ಸ್ವಲ್ಪವಾದರೂ ಹಳ್ಳಕೊಳ್ಳದಲ್ಲಿ ನೀರು ಸಂಗ್ರಹವಿದೆ.</p>.<p>ಗಂಗೇನಹಳ್ಳಿ ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ ಇಲ್ಲಿನ ಸುತ್ತಮುತ್ತಲ ರೈತರ ಬದುಕು ಹಸನು ಕಾಣಬಹುದಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸದಿದ್ದರೆ ಬೇಸಿಗೆ ಮುಗಿಯುವುದರೊಳಗೆ ಸಂಪೂರ್ಣ ಕೆರೆ ಬರಿದಾಗುವ ಜೊತೆಗೆ ಪ್ರಾಣಿ ಪಕ್ಷಿಗಳಿಗೂ ಸಂಕಷ್ಟ ಎದುರಾಗಲಿದೆ.</p>.<p>ಬೇಸಿಗೆಯಲ್ಲಿ ಕೆರೆಯಲ್ಲಿನ ನೀರನ್ನು ಮೋಟಾರು ಪಂಪು ಬಳಸಿ ಬಸಿಯುವ ಕ್ರಿಯೆ ಆರಂಭವಾಗಿದೆ. ಈ ಅಕ್ರಮ ಚಟುವಟಿಕೆ ವರ್ಷಪೂರ್ತಿ ಕೆರೆದಂಡೆಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಕೆರೆ–ನಾಲೆಗಳ ನೀರನ್ನು ಅಕ್ರಮವಾಗಿ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಈಚೆಗೆ ಆದೇಶವನ್ನೂ ಹೊರಡಿಸಿದೆ.</p>.<p>‘ಪ್ರಭಾವಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿ ಯುತ್ತಾರೆ. ನಾಮಕಾವಸ್ಥೆಗೆ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಅಧಿಕಾರಿಗಳು ಮೋಟಾರ್ ಪಂಪು ವಶಪಡಿಸಿಕೊಳ್ಳುತ್ತಾರೆ’ ಎಂದು ರೈತ ಮಹಿಳೆ ಜಯಮ್ಮ ಮತ್ತು ಗ್ರಾಮಸ್ಥರು ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-40-2029055915</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಿಕ್ಕೇರಿ: ಪ್ರತಿ ವರ್ಷ ಬೇಸಿಗೆ ಬಂತೆಂದರೆ ಪ್ರಾಣಿ ಪಕ್ಷಿಗಳಿಗೆ ಜೀವಗುಟುಕಾದ ಕೆರೆ ಮತ್ತು ಹಳ್ಳ– ಕೊಳ್ಳದ ನೀರನ್ನು ಕೆಲವರು ಅಕ್ರಮವಾಗಿ ಬಸಿಯುತ್ತಿದ್ದಾರೆ. ಇದರಿಂದ ಜಲಮೂಲಗಳು ಒಣಗುತ್ತಿವೆ ಎಂಬುದು ಪರಿಸರ ಪ್ರೇಮಿಗಳ ದೂರು.</p>.<p>ಬೇಸಿಗೆಯ ತಾಪಮಾನಕ್ಕೆ ಬಾಯಾರಿಕೆ ನೀಗಿಸಿಕೊಳ್ಳಲು ಪ್ರಾಣಿ ಪಕ್ಷಿಗಳು ಕೆರೆ ಕಟ್ಟೆಗಳ ನೀರನ್ನು ಅವಲಂಬಿಸಿವೆ. ಕಿಕ್ಕೇರಿ ಹೋಬಳಿಯ ಗಂಗೇನಹಳ್ಳಿ ಕೆರೆ ಸುಮಾರು 25 ಎಕರೆ ವಿಸ್ತಾರವನ್ನು ಹೊಂದಿದೆ. ಕಾಟಾಚಾರಕ್ಕೆ ಹೂಳು ತೆಗೆದಿರುವುದರಿಂದ ಅಲ್ಪ ಸ್ವಲ್ಪವಾದರೂ ಹಳ್ಳಕೊಳ್ಳದಲ್ಲಿ ನೀರು ಸಂಗ್ರಹವಿದೆ.</p>.<p>ಗಂಗೇನಹಳ್ಳಿ ಕೆರೆಯಲ್ಲಿ ನೀರು ತುಂಬಿದ್ದರೆ ಮಾತ್ರ ಇಲ್ಲಿನ ಸುತ್ತಮುತ್ತಲ ರೈತರ ಬದುಕು ಹಸನು ಕಾಣಬಹುದಾಗಿದೆ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಗಮನಹರಿಸದಿದ್ದರೆ ಬೇಸಿಗೆ ಮುಗಿಯುವುದರೊಳಗೆ ಸಂಪೂರ್ಣ ಕೆರೆ ಬರಿದಾಗುವ ಜೊತೆಗೆ ಪ್ರಾಣಿ ಪಕ್ಷಿಗಳಿಗೂ ಸಂಕಷ್ಟ ಎದುರಾಗಲಿದೆ.</p>.<p>ಬೇಸಿಗೆಯಲ್ಲಿ ಕೆರೆಯಲ್ಲಿನ ನೀರನ್ನು ಮೋಟಾರು ಪಂಪು ಬಳಸಿ ಬಸಿಯುವ ಕ್ರಿಯೆ ಆರಂಭವಾಗಿದೆ. ಈ ಅಕ್ರಮ ಚಟುವಟಿಕೆ ವರ್ಷಪೂರ್ತಿ ಕೆರೆದಂಡೆಯ ಪ್ರದೇಶಗಳಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಕಂಡೂ ಕಾಣದಂತೆ ಇದ್ದಾರೆ. ಕೆರೆ–ನಾಲೆಗಳ ನೀರನ್ನು ಅಕ್ರಮವಾಗಿ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರ ಈಚೆಗೆ ಆದೇಶವನ್ನೂ ಹೊರಡಿಸಿದೆ.</p>.<p>‘ಪ್ರಭಾವಿಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂಜರಿ ಯುತ್ತಾರೆ. ನಾಮಕಾವಸ್ಥೆಗೆ ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಅಧಿಕಾರಿಗಳು ಮೋಟಾರ್ ಪಂಪು ವಶಪಡಿಸಿಕೊಳ್ಳುತ್ತಾರೆ’ ಎಂದು ರೈತ ಮಹಿಳೆ ಜಯಮ್ಮ ಮತ್ತು ಗ್ರಾಮಸ್ಥರು ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-40-2029055915</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>