<p><strong>ಮಂಡ್ಯ</strong>: ‘ಕಲಾವಿದರು ಎಲೆಮೆರೆ ಕಾಯಿಯಂತೆ ಕಲಾ ಸೇವೆಯಲ್ಲಿ ತೊಡಗಿರುತ್ತಾರೆ. ಇವರ ಜೊತೆಗೆ ಸಣ್ಣ ಕೆಲಸದಲ್ಲಿ ತೊಡಗಿರುವವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಪ್ರೋತ್ಸಾಹ ನೀಡುವುದು ಮುಖ್ಯವಾಗಬೇಕು’ ಎಂದು ನಿವೃತ್ತ ಮುಖ್ಯ ಶಿಕ್ಷಕ ಪಿ.ರಾಮಮೂರ್ತಿ ಅಭಿಪ್ರಾಯಪಟ್ಟರು.</p>.<p>ನಗರದ ಹರ್ಡೀಕರ್ ಭವನದಲ್ಲಿ ನಿರಂಜನ ಅಕಾಡೆಮಿ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಪೇಂಟರ್ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಣ್ಣ ಬಳಿಯುವ ಮೂಲಕ ಅದನ್ನೇ ಕಾಯಕವಾಗಿಸಿಕೊಂಡು ಮುನ್ನಡೆಯುತ್ತಿರುವ ಎನ್.ರಾಮಚಂದ್ರರಾಜು ಅವರು ಕಾಯಕವೇ ಕೈಲಾಸ ಎಂಬುವ ಬಸವಣ್ಣನವರ ನಾಣ್ಣುಡಿಯಂತೆ ಬದುಕು ನಡೆಸುತ್ತಿದ್ದಾರೆ. ಇವರು ಇತರೆ ಕಲಾವಿದರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.</p>.<p>ಕಲಾಸೇವೆ ದೇವರ ಕೆಲಸವೆಂದು ಕೊಂಡಿರುವ ನಗರದ ಹೊಸಹಳ್ಳಿ ರಾಮಚಂದ್ರರಾಜು ಅವರಿಗೆ ತಮ್ಮ ಕುಟುಂಬವೂ ಕಲಾಸೇವೆಗೆ ಪ್ರೋತ್ಸಾಹಿಸುತ್ತಿರುವುದು ಮೆಚ್ಚುವ ಕೆಲಸವಾಗಿದೆ. ಎಲೆಮರೆ ಕಾಯಿಯಂತಿರುವ ಪೇಂಟರ್ ಸೇರಿದಂತೆ ಕಲಾವಿದರನ್ನು ನಿರಂಜನ ಅಕಾಡೆಮಿ ಗುರುತಿಸುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.</p>.<p>ಪೇಂಟರ್ ರಾಮಚಂದ್ರರಾಜು ಅವರಿಗೆ ‘ಕಾಯಕಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಂಶುಪಾಲ ಕುಮಾರ್, ಕಲಾವಿದರಾದ ಅಶೋಕ್, ಲಕ್ಷ್ಮಣ್, ಪುಟ್ಟಸ್ವಾಮಿ, ಜಿ.ವಿ.ರಾಮಚಂದ್ರು, ಸುಮಿತ್ರಾ ರಾಮಚಂದ್ರರಾಜು, ಜಯಲಕ್ಷ್ಮಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-40-546750787</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ‘ಕಲಾವಿದರು ಎಲೆಮೆರೆ ಕಾಯಿಯಂತೆ ಕಲಾ ಸೇವೆಯಲ್ಲಿ ತೊಡಗಿರುತ್ತಾರೆ. ಇವರ ಜೊತೆಗೆ ಸಣ್ಣ ಕೆಲಸದಲ್ಲಿ ತೊಡಗಿರುವವರನ್ನೂ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಪ್ರೋತ್ಸಾಹ ನೀಡುವುದು ಮುಖ್ಯವಾಗಬೇಕು’ ಎಂದು ನಿವೃತ್ತ ಮುಖ್ಯ ಶಿಕ್ಷಕ ಪಿ.ರಾಮಮೂರ್ತಿ ಅಭಿಪ್ರಾಯಪಟ್ಟರು.</p>.<p>ನಗರದ ಹರ್ಡೀಕರ್ ಭವನದಲ್ಲಿ ನಿರಂಜನ ಅಕಾಡೆಮಿ ವತಿಯಿಂದ ಕಾರ್ಮಿಕರ ದಿನಾಚರಣೆ ಅಂಗವಾಗಿ ಗುರುವಾರ ನಡೆದ ಪೇಂಟರ್ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಬಣ್ಣ ಬಳಿಯುವ ಮೂಲಕ ಅದನ್ನೇ ಕಾಯಕವಾಗಿಸಿಕೊಂಡು ಮುನ್ನಡೆಯುತ್ತಿರುವ ಎನ್.ರಾಮಚಂದ್ರರಾಜು ಅವರು ಕಾಯಕವೇ ಕೈಲಾಸ ಎಂಬುವ ಬಸವಣ್ಣನವರ ನಾಣ್ಣುಡಿಯಂತೆ ಬದುಕು ನಡೆಸುತ್ತಿದ್ದಾರೆ. ಇವರು ಇತರೆ ಕಲಾವಿದರಿಗೂ ಸ್ಫೂರ್ತಿಯಾಗಿದ್ದಾರೆ ಎಂದರು.</p>.<p>ಕಲಾಸೇವೆ ದೇವರ ಕೆಲಸವೆಂದು ಕೊಂಡಿರುವ ನಗರದ ಹೊಸಹಳ್ಳಿ ರಾಮಚಂದ್ರರಾಜು ಅವರಿಗೆ ತಮ್ಮ ಕುಟುಂಬವೂ ಕಲಾಸೇವೆಗೆ ಪ್ರೋತ್ಸಾಹಿಸುತ್ತಿರುವುದು ಮೆಚ್ಚುವ ಕೆಲಸವಾಗಿದೆ. ಎಲೆಮರೆ ಕಾಯಿಯಂತಿರುವ ಪೇಂಟರ್ ಸೇರಿದಂತೆ ಕಲಾವಿದರನ್ನು ನಿರಂಜನ ಅಕಾಡೆಮಿ ಗುರುತಿಸುವುದು ಉತ್ತಮ ಕೆಲಸ ಎಂದು ಶ್ಲಾಘಿಸಿದರು.</p>.<p>ಪೇಂಟರ್ ರಾಮಚಂದ್ರರಾಜು ಅವರಿಗೆ ‘ಕಾಯಕಯೋಗಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಾಂಶುಪಾಲ ಕುಮಾರ್, ಕಲಾವಿದರಾದ ಅಶೋಕ್, ಲಕ್ಷ್ಮಣ್, ಪುಟ್ಟಸ್ವಾಮಿ, ಜಿ.ವಿ.ರಾಮಚಂದ್ರು, ಸುಮಿತ್ರಾ ರಾಮಚಂದ್ರರಾಜು, ಜಯಲಕ್ಷ್ಮಿ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260515-40-546750787</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>