<p>ಮಂಡ್ಯ: ಸರ್ಕಾರ ಹಾಗೂ ಸಂಸ್ಥೆಗಳ ಸವಲತ್ತುಗಳನ್ನು ಅಂಗ ವಿಕಲರು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.</p>.<p>ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಷನ್ ಹಾಗೂ ಸ್ವಾಭಿಮಾನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆ ವಿದ್ಯುತ್ ಚಾಲಿತ ವಾಹನ ವಿತರಿಸಿ ಅವರು ಮಾತನಾಡಿದರು.</p>.<p>ಅಂಗವಿಕಲರಲ್ಲಿ ವಿಶೇಷ ಚೇತನ ಶಕ್ತಿ ಇದೆ. ಅಂಗವಿಕಲರಿಗೆ ಸವಲತ್ತು ಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಹಕರಿಸಬೇಕು ಎಂದರು.</p>.<p>12 ಮಂದಿ ಅಂಗವಿಕಲರಿಗೆ ₹1.15 ಲಕ್ಷ ವೆಚ್ಚದ ಅತ್ಯುತ್ತಮವಾದ ವಾಹನ ಕೊಡಲಾಗುತ್ತಿದೆ. ಸಂಸ್ಥೆಯವರೇ ಇವರನ್ನು ಗುರುತಿಸಿ ಈ ರೀತಿಯ ಕೆಲಸ ಮಾಡುತ್ತಿ ದ್ದಾರೆ. ಈ ವಾಹನ ಮನೆಯಲ್ಲಿ ಇದ್ದರೆ ವೀಲ್ ಚೇರ್, ಹೊರಗಡೆ ಬೈಕ್ ವಾಹನವಾಗಿ ಬಳಸಬಹುದು. ಇಂತಹ ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದರು.</p>.<p>ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ಅಮೇರಿಕನ್ ಇಂಡಿಯಾ ಫೌಂಡೇಷನ್ ನರೇಂದ್ರನ್, ಸ್ವಾಭಿಮಾನಿ ಫೌಂಡೇಷನ್ ನಂದೀಶ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-40-1082368741</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಸರ್ಕಾರ ಹಾಗೂ ಸಂಸ್ಥೆಗಳ ಸವಲತ್ತುಗಳನ್ನು ಅಂಗ ವಿಕಲರು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಜಿಲ್ಲಾಧಿಕಾರಿ ಕುಮಾರ ತಿಳಿಸಿದರು.</p>.<p>ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಮೆರಿಕನ್ ಇಂಡಿಯಾ ಫೌಂಡೇಷನ್ ಹಾಗೂ ಸ್ವಾಭಿಮಾನಿ ಫೌಂಡೇಷನ್ ವತಿಯಿಂದ ಅಂಗವಿಕಲರಿಗೆ ವಿದ್ಯುತ್ ಚಾಲಿತ ವಾಹನ ವಿತರಿಸಿ ಅವರು ಮಾತನಾಡಿದರು.</p>.<p>ಅಂಗವಿಕಲರಲ್ಲಿ ವಿಶೇಷ ಚೇತನ ಶಕ್ತಿ ಇದೆ. ಅಂಗವಿಕಲರಿಗೆ ಸವಲತ್ತು ಕೊಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡಲು ಸಹಕರಿಸಬೇಕು ಎಂದರು.</p>.<p>12 ಮಂದಿ ಅಂಗವಿಕಲರಿಗೆ ₹1.15 ಲಕ್ಷ ವೆಚ್ಚದ ಅತ್ಯುತ್ತಮವಾದ ವಾಹನ ಕೊಡಲಾಗುತ್ತಿದೆ. ಸಂಸ್ಥೆಯವರೇ ಇವರನ್ನು ಗುರುತಿಸಿ ಈ ರೀತಿಯ ಕೆಲಸ ಮಾಡುತ್ತಿ ದ್ದಾರೆ. ಈ ವಾಹನ ಮನೆಯಲ್ಲಿ ಇದ್ದರೆ ವೀಲ್ ಚೇರ್, ಹೊರಗಡೆ ಬೈಕ್ ವಾಹನವಾಗಿ ಬಳಸಬಹುದು. ಇಂತಹ ಸಂಸ್ಥೆಗಳು ಸಮಾಜದಲ್ಲಿ ಹೆಚ್ಚಾಗಬೇಕು ಎಂದರು.</p>.<p>ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ಕೋಮಲ್ ಕುಮಾರ್, ಅಮೇರಿಕನ್ ಇಂಡಿಯಾ ಫೌಂಡೇಷನ್ ನರೇಂದ್ರನ್, ಸ್ವಾಭಿಮಾನಿ ಫೌಂಡೇಷನ್ ನಂದೀಶ್ ಹಾಜರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260327-40-1082368741</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>