ಹೊಳಲ್ಕೆರೆ: ಮದುವೆ, ಮೆರವಣಿಗೆ, ಹಬ್ಬ, ಜಾತ್ರೆಗಳಲ್ಲಿ ಬ್ಯಾಂಡ್ ನುಡಿಸುವ ಕಲಾವಿದರೊಬ್ಬರು ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಭರಮಸಾಗರ ಹೋಬಳಿ ಚೀಳಂಗಿ ಗ್ರಾಮದ ಕಲಾವಿದ ನಿರಂಜನ ಮಂಗಳವಾರ ಹೊಳಲ್ಕೆರೆ ಕ್ಷೇತ್ರದಿಂದ ಅಂಬೇಡ್ಕರ್ ಸಮಾಜ ಪಾರ್ಟಿ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
‘ನನಗೆ ಆಸ್ತಿ, ಅಂತಸ್ತು, ಹಣ ಇಲ್ಲ. ಉರುಮೆ, ಕಹಳೆ ವಾದನ, ಬ್ಯಾಂಡ್ ನುಡಿಸುತ್ತೇನೆ. ಇದರಲ್ಲಿ ಬಂದ ಹಣದಿಂದ ಜೀವನ ನಡೆಸುತ್ತೇವೆ. ನಾನೂ ಬಿ.ಎ, ಬಿ.ಇಡಿ, ಎಂ.ಎ, ಎಂ.ಎಸ್.ಡಬ್ಲ್ಯು ಪದವಿ ಪಡೆದಿದ್ದೇನೆ’ ಎನ್ನುತ್ತಾರೆ ನಿರಂಜನ.
‘ಮತದಾರರು ಹಣಬಲದ ಮುಂದೆ ವಿದ್ಯೆ, ಮೌಲ್ಯಗಳಿಗೆ ಬೆಲೆ ಕೊಡುತ್ತಾರಾ ನೋಡಬೇಕು’ ಎನ್ನುತ್ತಾರೆ ಅವರು.