<p>ಕೆ.ಆರ್. ಪೇಟೆ: ಪಟ್ಟಣದ ಜಯನಗರ ಬಡಾವಣೆಯ ಮುಖ್ಯ ರಸ್ತೆಯಾದ ಸಾರ್ವಜನಿಕ ಆಸ್ಪತ್ರೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 1 ಕಿ.ಮೀ ಮಾರ್ಗ ಸಂಪೂರ್ಣ ಹಾಳಾಗಿದ್ದು ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿ, ಹೊಂಡಗಳಿಂದ ಕೂಡಿದ್ದು ವಾಹನದಲ್ಲಿ ಸಾಗಲು, ನಡೆದುಕೊಂಡು ಹೋಗಲು ದುಸ್ತರವಾಗಿದೆ.</p>.<p>ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆಸ್ಪತ್ರೆಗೆ ಹೋಗುವವರು, ಶಾಲಾ ಮಕ್ಕಳು ಮತ್ತು ಸಂತೆಗೆ ಹೋಗುವವರು ಇದೇ ರಸ್ತೆ ಬಳಸಬೇಕಿದೆ. ಸ್ಕೂಲ್ ಆಫ್ ಇಂಡಿಯಾದಿಂದ ಸಾರ್ವಜನಿಕ ಆಸ್ಪತ್ರೆಯವರೆಗಿನ ರಸ್ತೆ ಮೈಸೂರಿಗೆ ಪ್ರವಾಸಿಮಂದಿರ ವೃತ್ತ ಬಳಸದೆ ಪರ್ಯಾಯ ರಸ್ತೆಯಾಗಿದೆ.</p>.<p>ಆದರೆ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಪಟ್ಟಣದ ಪುರಸಭೆ ಗಮನಹರಿಸದ್ದರಿಂದ ವಾಹನ ಸವಾರರು ಹೊಂಡಗಳಿಗೆ ಬಿದ್ದು ಗಾಯಗೊಳ್ಳುತಿದ್ದಾರೆ. .ಒಂದು ಕಿ.ಮೀ.ರಸ್ತೆಯ ಈ ಮುಖ್ಯ ರಸ್ತೆಯಲ್ಲಿ 100 ರಿಂದ 200 ಮೀಟರ್ ರಸ್ತೆ ಬಿಟ್ಟರೆ ಉಳಿದೆಲ್ಲವೂ ಹಾಳಾಗಿದೆ. ರಸ್ತೆಯಲ್ಲೇ ಚರಂಡಿ ನೀರು, ಮ್ಯಾನ್ಹೋಲ್ ಗಳ ನೀರು ಹರಿಯುತ್ತಿ ದೆ. ಈ ರಸ್ತೆಯಲ್ಲಿ ವಾಹನ ಸಂಚಾರವೂ ಅಧಿಕ ಇರುವದರಿಂದ ರಸ್ತೆ ನವೀಕರಿಸಿದರೆ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ.</p>.<p>ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಇತ್ತ ಗಮನಹರಿಸಿ ಮಳೆಬರುವ ಮುನ್ನ ರಸ್ತೆ ನವೀಕರಿಸುವುರೊಂದಿಗೆ ಬೆಳೆದಿರುವ ಗಿಡಗಂಟಿ ತೆರವು ಮಾಡಿಸಬೇಕು ಎಂದು ಜಯನಗರ ಬಡಾವಣೆಯ ನಿವಾಸಿಗಳು ಮತ್ತು ವಾಹನ ಸವಾರರು ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260402-40-615208947</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆ.ಆರ್. ಪೇಟೆ: ಪಟ್ಟಣದ ಜಯನಗರ ಬಡಾವಣೆಯ ಮುಖ್ಯ ರಸ್ತೆಯಾದ ಸಾರ್ವಜನಿಕ ಆಸ್ಪತ್ರೆಯಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ 1 ಕಿ.ಮೀ ಮಾರ್ಗ ಸಂಪೂರ್ಣ ಹಾಳಾಗಿದ್ದು ಅಲ್ಲಲ್ಲಿ ಡಾಂಬರ್ ಕಿತ್ತು ಹೋಗಿ, ಹೊಂಡಗಳಿಂದ ಕೂಡಿದ್ದು ವಾಹನದಲ್ಲಿ ಸಾಗಲು, ನಡೆದುಕೊಂಡು ಹೋಗಲು ದುಸ್ತರವಾಗಿದೆ.</p>.<p>ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆಸ್ಪತ್ರೆಗೆ ಹೋಗುವವರು, ಶಾಲಾ ಮಕ್ಕಳು ಮತ್ತು ಸಂತೆಗೆ ಹೋಗುವವರು ಇದೇ ರಸ್ತೆ ಬಳಸಬೇಕಿದೆ. ಸ್ಕೂಲ್ ಆಫ್ ಇಂಡಿಯಾದಿಂದ ಸಾರ್ವಜನಿಕ ಆಸ್ಪತ್ರೆಯವರೆಗಿನ ರಸ್ತೆ ಮೈಸೂರಿಗೆ ಪ್ರವಾಸಿಮಂದಿರ ವೃತ್ತ ಬಳಸದೆ ಪರ್ಯಾಯ ರಸ್ತೆಯಾಗಿದೆ.</p>.<p>ಆದರೆ ನಿರ್ವಹಣೆಯ ಜವಾಬ್ದಾರಿ ಹೊಂದಿರುವ ಪಟ್ಟಣದ ಪುರಸಭೆ ಗಮನಹರಿಸದ್ದರಿಂದ ವಾಹನ ಸವಾರರು ಹೊಂಡಗಳಿಗೆ ಬಿದ್ದು ಗಾಯಗೊಳ್ಳುತಿದ್ದಾರೆ. .ಒಂದು ಕಿ.ಮೀ.ರಸ್ತೆಯ ಈ ಮುಖ್ಯ ರಸ್ತೆಯಲ್ಲಿ 100 ರಿಂದ 200 ಮೀಟರ್ ರಸ್ತೆ ಬಿಟ್ಟರೆ ಉಳಿದೆಲ್ಲವೂ ಹಾಳಾಗಿದೆ. ರಸ್ತೆಯಲ್ಲೇ ಚರಂಡಿ ನೀರು, ಮ್ಯಾನ್ಹೋಲ್ ಗಳ ನೀರು ಹರಿಯುತ್ತಿ ದೆ. ಈ ರಸ್ತೆಯಲ್ಲಿ ವಾಹನ ಸಂಚಾರವೂ ಅಧಿಕ ಇರುವದರಿಂದ ರಸ್ತೆ ನವೀಕರಿಸಿದರೆ ಪ್ರಯಾಣಿಕರಿಗೆ ಉಪಯುಕ್ತವಾಗಲಿದೆ.</p>.<p>ಪುರಸಭೆಯ ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳು ಇತ್ತ ಗಮನಹರಿಸಿ ಮಳೆಬರುವ ಮುನ್ನ ರಸ್ತೆ ನವೀಕರಿಸುವುರೊಂದಿಗೆ ಬೆಳೆದಿರುವ ಗಿಡಗಂಟಿ ತೆರವು ಮಾಡಿಸಬೇಕು ಎಂದು ಜಯನಗರ ಬಡಾವಣೆಯ ನಿವಾಸಿಗಳು ಮತ್ತು ವಾಹನ ಸವಾರರು ಮನವಿ ಮಾಡಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260402-40-615208947</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>