<p><strong>ಮಂಡ್ಯ:</strong> ‘ಮರೆಯೋದುಂಟೆ ಮೈಸೂರು ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..’ ಈ ಗೀತೆಗೆ ಹಳೇ ಮೈಸೂರು ಭಾಗದಲ್ಲಿ ನಾಡಗೀತೆಗೆ ಸಿಕ್ಕಷ್ಟೇ ಗೌರವ ಸಿಗುತ್ತದೆ. ದೇವರ ಫೋಟೊಗಳ ಜೊತೆ ನಾಲ್ವಡಿ ಅವರ ಭಾವಚಿತ್ರಕ್ಕೂ ಇಲ್ಲಿಯ ಜನರು ಭಕ್ತಿಭಾವದಿಂದ ಪೂಜಿಸುತ್ತಾರೆ.</p>.<p>ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ಸುಧಾರಣೆ, ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮೈಸೂರು ಸಂಸ್ಥಾನದ 24ನೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅವಧಿಯನ್ನು (1902 ರಿಂದ 1940) ‘ಸುವರ್ಣ ಯುಗ’ ಎಂದು ಕರೆಯಲಾಗುತ್ತದೆ. ನಾಲ್ವಡಿಯವರು ವಿದ್ವಾಂಸ, ಶಿಕ್ಷಣ ತಜ್ಞ, ಇತಿಹಾಸಕಾರ ಹಾಗೂ ಸಾಮಾಜಿಕ ಕಾನೂನುಗಳ ಹರಿಕಾರರಾಗಿ ಇಂದಿಗೂ ಜನಮಾನಸದಲ್ಲಿ ಹಸಿರಾಗಿದ್ದಾರೆ.</p>.<p>‘ಸಕ್ಕರೆ ನಗರ’ ಮಂಡ್ಯ ಜಿಲ್ಲೆಗೆ ನಾಲ್ವಡಿ ಅವರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಮಂಡ್ಯ ಪ್ರದೇಶವನ್ನು ಪ್ರತ್ಯೇಕಗೊಳಿಸಿ 1939ರಲ್ಲಿ ಮಂಡ್ಯ ಜಿಲ್ಲೆ ರಚನೆ ಮಾಡಲಾಯಿತು.</p>.<p>1.20 ಲಕ್ಷ ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರು ಪೂರೈಸುವ ರೈತರ ಜೀವನಾಡಿ ‘ಕೃಷ್ಣರಾಜಸಾಗರ ಜಲಾಶಯ’ (ಕನ್ನಂಬಾಡಿ ಕಟ್ಟೆ) ನಿರ್ಮಿಸಿಕೊಟ್ಟಿದ್ದಾರೆ. ಅಣೆಕಟ್ಟೆಯ ಮುಂಭಾಗವಿರುವ ವಿಶ್ವವಿಖ್ಯಾತ ಬೃಂದಾವನ ಉದ್ಯಾನ ನಿರ್ಮಾಣಕ್ಕೂ ಕಾರಣಕರ್ತರಾಗಿದ್ದಾರೆ.</p>.<blockquote>ಶಿವನಸಮುದ್ರ ಜಲವಿದ್ಯುತ್:</blockquote>.<p>ನೀರಾವರಿಗೆ ಆಧಾರವಾಗಿರುವ ಇರ್ವಿನ್ ನಾಲೆ (ವಿಶ್ವೇಶ್ವರಯ್ಯ ನಾಲೆ), ಹುಲಿಕೆರೆ ಸುರಂಗ ಕಾಲುವೆ ನಿರ್ಮಾಣವಾಗಿದ್ದು ಇವರ ಅವಧಿಯಲ್ಲೆ. ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು 1902ರಲ್ಲಿ ಸ್ಥಾಪಿಸಿದರು. ಇದರ ಫಲವಾಗಿ 1905 ಆಗಸ್ಟ್ 3ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.</p>.<p>ಮೈಸೂರು ಸಂಸ್ಥಾನದ ಪ್ರಥಮ ಕೃಷಿ ನಿರ್ದೇಶಕರಾಗಿದ್ದ ಕೆನಡಾ ದೇಶದ ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಅವರ ಅವಿರತ ಪ್ರಯತ್ನ ಹಾಗೂ ನಾಲ್ವಡಿಯವರ ದೂರದೃಷ್ಟಿಯ ಫಲವಾಗಿ ಮೈಸೂರು ಸಕ್ಕರೆ ಕಂಪನಿ (ಮೈಷುಗರ್ ಕಾರ್ಖಾನೆ) 1933ರಲ್ಲಿ ಆರಂಭವಾಯಿತು. ಜತೆಗೆ ಕೋಲ್ಮನ್ ನೇತೃತ್ವದಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (ವಿ.ಸಿ.ಫಾರ್ಮ್) 1931ರಲ್ಲಿ ಪ್ರಾರಂಭಗೊಂಡಿತು. ಮಂಡ್ಯ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಕಲ್ಲು ಕಟ್ಟಡ ಶಾಲಾ ಕಾಲೇಜು ನಿರ್ಮಾಣವಾಗಿದ್ದು 1939–40ರ ಅವಧಿಯಲ್ಲಿ.</p>.<p>ಬೆಳಗೊಳದ ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (1939), ಮಳವಳ್ಳಿ ತಾಲ್ಲೂಕಿನ ಹಲಗೂರು ಜಯಚಾಮರಾಜೇಂದ್ರ ಸೇತುವೆ ನಿರ್ಮಾಣ ಸೇರಿದಂತೆ ಶಾಶ್ವತ ಕೊಡುಗೆಗಳನ್ನು ನಾಲ್ವಡಿ ಮಹಾರಾಜರು ನೀಡಿದ್ದಾರೆ ಎಂದು ಇಲ್ಲಿನ ಜನರು ಸ್ಮರಿಸುತ್ತಾರೆ.</p>.<h2><strong>ಕೈಗಾರಿಕಾ ಅಭಿವೃದ್ಧಿಗಳು</strong></h2><h2></h2><p>1914ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ಕೂಲ್, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1936ರಲ್ಲಿ ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಇತ್ಯಾದಿ... </p>. <h2><strong>ಜಾರಿಗೊಳಿಸಿದ ಸಾಮಾಜಿಕ ಕಾನೂನುಗಳು </strong></h2><p>* 1905: ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿ </p><p>* 1909: ದೇವದಾಸಿ ಪದ್ಧತಿ ನಿಷೇಧ </p><p>* 1910: ಬಸವಿ ಮತ್ತು ಗೆಜ್ಜೆಪೂಜೆ ಪದ್ಧತಿ ರದ್ದತಿ </p><p>* 1913: ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿ </p><p>* 1914: ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ </p><p>* 1918: ಗ್ರಾಮ ಪಂಚಾಯಿತಿಗಳ ಕಾಯ್ದೆ ಜಾರಿ </p><p>* 1919: ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ದತಿ </p><p>* 1927: ಸ್ತ್ರೀಯರಿಗೆ ಮತದಾನದ ಹಕ್ಕು ಮೊಟ್ಟಮೊದಲ ಬಾರಿಗೆ </p><p>* 1936: ವಿಧವೆಯರಿಗೆ ಮರುವಿವಾಹ ಕಾಯ್ದೆ ಜಾರಿ </p><p>* 1936: ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ </p> .<div><blockquote>ಮೈಸೂರು ಭಾಗದ ಅಭಿವೃದ್ಧಿಯ ಹರಿಕಾರ ನಾಲ್ವಡಿ ಅವರ ಜಯಂತಿಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು. ಅವರ ಕೊಡುಗೆಯನ್ನು ಸ್ಮರಿಸಬೇಕು </blockquote><span class="attribution">ತಗ್ಗಹಳ್ಳಿ ವೆಂಕಟೇಶ್, ಸಂಸ್ಥಾಪಕ ಅಧ್ಯಕ್ಷ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿಮಾನಿಗಳ ಬಳಗ, ಮಂಡ್ಯ</span></div>.<h2>ಒಂದು ಬಾಳು, ಅಪಾರ ಬೆಳಕು</h2><p>ಶಿವನಸಮುದ್ರ ಜಲವಿದ್ಯುತ್ ಯೋಜನೆ (1902), ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ (1903), ಚಿತ್ರದುರ್ಗದ ವಾಣಿವಿಲಾಸ ಸಾಗರ (1907), ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (1909), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (1913), ಬೆಂಗಳೂರಿನಲ್ಲಿ ಕೃಷಿ ವಿವಿ (1913), ಕನ್ನಡ ಸಾಹಿತ್ಯ ಪರಿಷತ್ತು (1915), ಸಮಾಜದ ದುರ್ಬಲ ವರ್ಗ ಸಬಲೀಕರಣಕ್ಕೆ ಮೈಸೂರು ಸಾಮಾಜಿಕ ಪ್ರಗತಿ ಸಂಘ (1915), ಮೈಸೂರು ವಿವಿ (1916), ಬೆಂಗಳೂರು ಮುದ್ರಣ ಮತ್ತು ಪ್ರಕಾಶನ ಸಂಸ್ಥೆ (1916), ಮೈಸೂರು ಯುವರಾಜ ಕಾಲೇಜು (1916). ಮೈಸೂರು ಚೇಂಬರ್ ಆಫ್ ಕಾಮರ್ಸ್ (1916), ಸರ್ಕಾರಿ ಶ್ರೀಗಂಧದ ಎಣ್ಣೆ ಕಾರ್ಖಾನೆ (1916), ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (1917), ಬೆಂಗಳೂರಿನ ಸ್ಕೂಲ್ ಆಫ್ ಎಂಜಿನಿಯರಿಂಗ್ (1917), ಲಲಿತ ಮಹಲ್ ಅರಮನೆ (1921), ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (1923), ಮೈಸೂರು ಮೆಡಿಕಲ್ ಕಾಲೇಜು (1924), ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ (1925), ಮೈಸೂರಿನ ಕೆ.ಆರ್.ಆಸ್ಪತ್ರೆ (1927), ಬೆಂಗಳೂರಿನ ಕೆ.ಆರ್.ಮಾರುಕಟ್ಟೆ (1928), ಬೆಂಗಳೂರಿನ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (1934), ಬೆಂಗಳೂರಿನಲ್ಲಿ ಮೈಸೂರು ಲ್ಯಾಂಪ್ಸ್ (1936) ಇತ್ಯಾದಿ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ‘ಮರೆಯೋದುಂಟೆ ಮೈಸೂರು ದೊರೆಯ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ..’ ಈ ಗೀತೆಗೆ ಹಳೇ ಮೈಸೂರು ಭಾಗದಲ್ಲಿ ನಾಡಗೀತೆಗೆ ಸಿಕ್ಕಷ್ಟೇ ಗೌರವ ಸಿಗುತ್ತದೆ. ದೇವರ ಫೋಟೊಗಳ ಜೊತೆ ನಾಲ್ವಡಿ ಅವರ ಭಾವಚಿತ್ರಕ್ಕೂ ಇಲ್ಲಿಯ ಜನರು ಭಕ್ತಿಭಾವದಿಂದ ಪೂಜಿಸುತ್ತಾರೆ.</p>.<p>ಕೃಷಿ, ಶಿಕ್ಷಣ, ಆರೋಗ್ಯ, ಸಾಮಾಜಿಕ ಸುಧಾರಣೆ, ಕೈಗಾರಿಕಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಮೈಸೂರು ಸಂಸ್ಥಾನದ 24ನೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ಅವಧಿಯನ್ನು (1902 ರಿಂದ 1940) ‘ಸುವರ್ಣ ಯುಗ’ ಎಂದು ಕರೆಯಲಾಗುತ್ತದೆ. ನಾಲ್ವಡಿಯವರು ವಿದ್ವಾಂಸ, ಶಿಕ್ಷಣ ತಜ್ಞ, ಇತಿಹಾಸಕಾರ ಹಾಗೂ ಸಾಮಾಜಿಕ ಕಾನೂನುಗಳ ಹರಿಕಾರರಾಗಿ ಇಂದಿಗೂ ಜನಮಾನಸದಲ್ಲಿ ಹಸಿರಾಗಿದ್ದಾರೆ.</p>.<p>‘ಸಕ್ಕರೆ ನಗರ’ ಮಂಡ್ಯ ಜಿಲ್ಲೆಗೆ ನಾಲ್ವಡಿ ಅವರು ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಮೈಸೂರು ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ ಮಂಡ್ಯ ಪ್ರದೇಶವನ್ನು ಪ್ರತ್ಯೇಕಗೊಳಿಸಿ 1939ರಲ್ಲಿ ಮಂಡ್ಯ ಜಿಲ್ಲೆ ರಚನೆ ಮಾಡಲಾಯಿತು.</p>.<p>1.20 ಲಕ್ಷ ಎಕರೆಗೂ ಹೆಚ್ಚು ಜಮೀನಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರು ಪೂರೈಸುವ ರೈತರ ಜೀವನಾಡಿ ‘ಕೃಷ್ಣರಾಜಸಾಗರ ಜಲಾಶಯ’ (ಕನ್ನಂಬಾಡಿ ಕಟ್ಟೆ) ನಿರ್ಮಿಸಿಕೊಟ್ಟಿದ್ದಾರೆ. ಅಣೆಕಟ್ಟೆಯ ಮುಂಭಾಗವಿರುವ ವಿಶ್ವವಿಖ್ಯಾತ ಬೃಂದಾವನ ಉದ್ಯಾನ ನಿರ್ಮಾಣಕ್ಕೂ ಕಾರಣಕರ್ತರಾಗಿದ್ದಾರೆ.</p>.<blockquote>ಶಿವನಸಮುದ್ರ ಜಲವಿದ್ಯುತ್:</blockquote>.<p>ನೀರಾವರಿಗೆ ಆಧಾರವಾಗಿರುವ ಇರ್ವಿನ್ ನಾಲೆ (ವಿಶ್ವೇಶ್ವರಯ್ಯ ನಾಲೆ), ಹುಲಿಕೆರೆ ಸುರಂಗ ಕಾಲುವೆ ನಿರ್ಮಾಣವಾಗಿದ್ದು ಇವರ ಅವಧಿಯಲ್ಲೆ. ಏಷ್ಯಾ ಖಂಡದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎಂಬ ಖ್ಯಾತಿಗೆ ಪಾತ್ರವಾಗಿರುವ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು 1902ರಲ್ಲಿ ಸ್ಥಾಪಿಸಿದರು. ಇದರ ಫಲವಾಗಿ 1905 ಆಗಸ್ಟ್ 3ರಂದು ಪ್ರಥಮವಾಗಿ ಬೆಂಗಳೂರಿನಲ್ಲಿ ದೀಪಗಳು ಬೆಳಗಿದವು.</p>.<p>ಮೈಸೂರು ಸಂಸ್ಥಾನದ ಪ್ರಥಮ ಕೃಷಿ ನಿರ್ದೇಶಕರಾಗಿದ್ದ ಕೆನಡಾ ದೇಶದ ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಅವರ ಅವಿರತ ಪ್ರಯತ್ನ ಹಾಗೂ ನಾಲ್ವಡಿಯವರ ದೂರದೃಷ್ಟಿಯ ಫಲವಾಗಿ ಮೈಸೂರು ಸಕ್ಕರೆ ಕಂಪನಿ (ಮೈಷುಗರ್ ಕಾರ್ಖಾನೆ) 1933ರಲ್ಲಿ ಆರಂಭವಾಯಿತು. ಜತೆಗೆ ಕೋಲ್ಮನ್ ನೇತೃತ್ವದಲ್ಲಿ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರ (ವಿ.ಸಿ.ಫಾರ್ಮ್) 1931ರಲ್ಲಿ ಪ್ರಾರಂಭಗೊಂಡಿತು. ಮಂಡ್ಯ ಜಿಲ್ಲಾಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ, ಕಲ್ಲು ಕಟ್ಟಡ ಶಾಲಾ ಕಾಲೇಜು ನಿರ್ಮಾಣವಾಗಿದ್ದು 1939–40ರ ಅವಧಿಯಲ್ಲಿ.</p>.<p>ಬೆಳಗೊಳದ ರಾಸಾಯನಿಕ ಮತ್ತು ಗೊಬ್ಬರ ಕಾರ್ಖಾನೆ (1939), ಮಳವಳ್ಳಿ ತಾಲ್ಲೂಕಿನ ಹಲಗೂರು ಜಯಚಾಮರಾಜೇಂದ್ರ ಸೇತುವೆ ನಿರ್ಮಾಣ ಸೇರಿದಂತೆ ಶಾಶ್ವತ ಕೊಡುಗೆಗಳನ್ನು ನಾಲ್ವಡಿ ಮಹಾರಾಜರು ನೀಡಿದ್ದಾರೆ ಎಂದು ಇಲ್ಲಿನ ಜನರು ಸ್ಮರಿಸುತ್ತಾರೆ.</p>.<h2><strong>ಕೈಗಾರಿಕಾ ಅಭಿವೃದ್ಧಿಗಳು</strong></h2><h2></h2><p>1914ರಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಸ್ಕೂಲ್, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಬೆಂಗಳೂರಿನ ಸಾಬೂನು ಕಾರ್ಖಾನೆ, ಮೈಸೂರಿನ ಗಂಧದ ಎಣ್ಣೆ ಕಾರ್ಖಾನೆ, ಸಿಮೆಂಟ್ ಕಾರ್ಖಾನೆ, 1936ರಲ್ಲಿ ಮೈಸೂರು ಪೇಪರ್ ಮಿಲ್, ಮಂಗಳೂರು ಹೆಂಚು ಕಾರ್ಖಾನೆ, ಷಹಬಾದಿನ ಸಿಮೆಂಟ್ ಕಾರ್ಖಾನೆ, ಮೈಸೂರಿನ ಅರಗು ಮತ್ತು ಬಣ್ಣದ ಕಾರ್ಖಾನೆ, ಕೊಡಗಿನ ಕಾಫಿ ಸಂಶೋಧನಾ ಕೇಂದ್ರ ಇತ್ಯಾದಿ... </p>. <h2><strong>ಜಾರಿಗೊಳಿಸಿದ ಸಾಮಾಜಿಕ ಕಾನೂನುಗಳು </strong></h2><p>* 1905: ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿ </p><p>* 1909: ದೇವದಾಸಿ ಪದ್ಧತಿ ನಿಷೇಧ </p><p>* 1910: ಬಸವಿ ಮತ್ತು ಗೆಜ್ಜೆಪೂಜೆ ಪದ್ಧತಿ ರದ್ದತಿ </p><p>* 1913: ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿ </p><p>* 1914: ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ </p><p>* 1918: ಗ್ರಾಮ ಪಂಚಾಯಿತಿಗಳ ಕಾಯ್ದೆ ಜಾರಿ </p><p>* 1919: ಮಾಧ್ಯಮಿಕ ಶಾಲಾ ಮಟ್ಟದಲ್ಲಿ ಶಿಕ್ಷಣ ಶುಲ್ಕ ರದ್ದತಿ </p><p>* 1927: ಸ್ತ್ರೀಯರಿಗೆ ಮತದಾನದ ಹಕ್ಕು ಮೊಟ್ಟಮೊದಲ ಬಾರಿಗೆ </p><p>* 1936: ವಿಧವೆಯರಿಗೆ ಮರುವಿವಾಹ ಕಾಯ್ದೆ ಜಾರಿ </p><p>* 1936: ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿ </p> .<div><blockquote>ಮೈಸೂರು ಭಾಗದ ಅಭಿವೃದ್ಧಿಯ ಹರಿಕಾರ ನಾಲ್ವಡಿ ಅವರ ಜಯಂತಿಯನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಚರಿಸಬೇಕು. ಅವರ ಕೊಡುಗೆಯನ್ನು ಸ್ಮರಿಸಬೇಕು </blockquote><span class="attribution">ತಗ್ಗಹಳ್ಳಿ ವೆಂಕಟೇಶ್, ಸಂಸ್ಥಾಪಕ ಅಧ್ಯಕ್ಷ, ನಾಲ್ವಡಿ ಕೃಷ್ಣರಾಜ ಒಡೆಯರ್ ಅಭಿಮಾನಿಗಳ ಬಳಗ, ಮಂಡ್ಯ</span></div>.<h2>ಒಂದು ಬಾಳು, ಅಪಾರ ಬೆಳಕು</h2><p>ಶಿವನಸಮುದ್ರ ಜಲವಿದ್ಯುತ್ ಯೋಜನೆ (1902), ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆ (1903), ಚಿತ್ರದುರ್ಗದ ವಾಣಿವಿಲಾಸ ಸಾಗರ (1907), ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (1909), ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (1913), ಬೆಂಗಳೂರಿನಲ್ಲಿ ಕೃಷಿ ವಿವಿ (1913), ಕನ್ನಡ ಸಾಹಿತ್ಯ ಪರಿಷತ್ತು (1915), ಸಮಾಜದ ದುರ್ಬಲ ವರ್ಗ ಸಬಲೀಕರಣಕ್ಕೆ ಮೈಸೂರು ಸಾಮಾಜಿಕ ಪ್ರಗತಿ ಸಂಘ (1915), ಮೈಸೂರು ವಿವಿ (1916), ಬೆಂಗಳೂರು ಮುದ್ರಣ ಮತ್ತು ಪ್ರಕಾಶನ ಸಂಸ್ಥೆ (1916), ಮೈಸೂರು ಯುವರಾಜ ಕಾಲೇಜು (1916). ಮೈಸೂರು ಚೇಂಬರ್ ಆಫ್ ಕಾಮರ್ಸ್ (1916), ಸರ್ಕಾರಿ ಶ್ರೀಗಂಧದ ಎಣ್ಣೆ ಕಾರ್ಖಾನೆ (1916), ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (1917), ಬೆಂಗಳೂರಿನ ಸ್ಕೂಲ್ ಆಫ್ ಎಂಜಿನಿಯರಿಂಗ್ (1917), ಲಲಿತ ಮಹಲ್ ಅರಮನೆ (1921), ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಸ್ಥಾವರ (1923), ಮೈಸೂರು ಮೆಡಿಕಲ್ ಕಾಲೇಜು (1924), ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ (1925), ಮೈಸೂರಿನ ಕೆ.ಆರ್.ಆಸ್ಪತ್ರೆ (1927), ಬೆಂಗಳೂರಿನ ಕೆ.ಆರ್.ಮಾರುಕಟ್ಟೆ (1928), ಬೆಂಗಳೂರಿನ ವಾಣಿವಿಲಾಸ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ (1934), ಬೆಂಗಳೂರಿನಲ್ಲಿ ಮೈಸೂರು ಲ್ಯಾಂಪ್ಸ್ (1936) ಇತ್ಯಾದಿ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>