<p><strong>ಮಂಡ್ಯ</strong>: ‘ಮಂಡ್ಯದ ಕೆ.ವಿ. ಶಂಕರಗೌಡ, ಜಿ. ಮಾದೇಗೌಡ, ಎಚ್.ಡಿ. ಚೌಡಯ್ಯ ಈ ಮೂವರು ಆದರ್ಶ ರಾಜಕಾರಣಿಗಳು. ಮೌಲ್ಯಯುತ ರಾಜಕಾರಣಕ್ಕೆ ಮಂಡ್ಯ ಹೆಸರುವಾಸಿಯಾಗಿತ್ತು. ನನ್ನ ಅಧಿಕಾರವಧಿಯಲ್ಲಿ ಇಲ್ಲಿನ ಜನರು ಕೊಟ್ಟ ಪ್ರೀತಿ ಮತ್ತು ಸಹಕಾರಕ್ಕಾಗಿ ಆಭಾರಿಯಾಗಿದ್ದೇನೆ’ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು.</p><p>ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ. ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ’, ‘ಶ್ರೀಮತಿ ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿಕ ಪ್ರಶಸ್ತಿ’ ಹಾಗೂ ‘ಶ್ರೀಮತಿ ಎಂ.ಆರ್. ಶಶಿಕಲಾ ಟಿ. ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p><p>ನನ್ನ 37 ವರ್ಷಗಳ ಸೇವಾವಧಿಯಲ್ಲಿ ಮಂಡ್ಯದ ಕೆಲಸ ಆತ್ಮತೃಪ್ತಿ ತಂದುಕೊಟ್ಟಿದೆ. ಇಲ್ಲಿನ ಜನರಿಂದ ಒಳ್ಳೆಯ ಕೆಲಸಗಳಿಗೆ ಸ್ಪಂದನೆ ಪ್ರೋತ್ಸಾಹ ಸಿಗುತ್ತದೆ. ಟಿ.ತಿಮ್ಮೇಗೌಡ ಅವರು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮಂಗಲ ಗ್ರಾಮ ಅಭಿವೃದ್ಧಿಪಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾನು ಗೌರವಿಸುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಪ್ರಶಂಸಿದರು.</p><p>ಪ್ರತಿಷ್ಠಾನಗಳು ಬರೀ ಸಾಧಕರನ್ನು ಗೌರವಿಸುವ ಜೊತೆಗೆ ಇಲ್ಲಿನ ಯುವ ಜನತೆಗೆ ದೇಶ– ಹೊರದೇಶಗಳಲ್ಲಿ ಕೆಲಸ ಮಾಡಲು ಬೇಕಾದ ವೃತ್ತಿ ಕೌಶಲವನ್ನು ಕಲಿಸಬೇಕಾದ ಅಗತ್ಯತೆ ಇದೆ ಎಂದರು. </p><p>ಬೆಂಗಳೂರು ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ. ವೆಂಕಟಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ, ಟಿ.ತಿಮ್ಮೇಗೌಡರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. </p><p>ಜನಪದ ಸಂಗೀತ ಗಾಯನ ಹಾಗೂ ಟಿ.ತಿಮ್ಮೇಗೌಡರು ನಡೆದು ಬಂದ ಜೀವನ ಹಾದಿಯ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎ.ಸಿ. ರಮೇಶ್ ವಹಿಸಿದ್ದರು.</p><p>ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೌಮ್ಯನಾಥ ಸ್ವಾಮೀಜಿ ಹಾಗೂ ಸತ್ಕೀರ್ತಿನಾಥ ಸ್ವಾಮೀಜಿ, ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಟಿ.ತಿಮ್ಮೇಗೌಡ, ತಿಮ್ಮೇಗೌಡರ ಪತ್ನಿ ಶಶಿಕಲಾ, ಪ್ರತಿಷ್ಠಾನದ ಪದಾಧಿಕಾರಿಗಳಾದ ಕೆ.ಎಂ. ಕೃಷ್ಣೇಗೌಡ ಕೀಲಾರ, ಟಿ.ಶಂಕರೇಗೌಡ, ಎಚ್.ಆರ್. ಕನ್ನಿಕಾ, ಶಿವಣ್ಣ ಮಂಗಲ, ಪ್ರಕಾಶ್, ದೇವರಾಜು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ‘ಮಂಡ್ಯದ ಕೆ.ವಿ. ಶಂಕರಗೌಡ, ಜಿ. ಮಾದೇಗೌಡ, ಎಚ್.ಡಿ. ಚೌಡಯ್ಯ ಈ ಮೂವರು ಆದರ್ಶ ರಾಜಕಾರಣಿಗಳು. ಮೌಲ್ಯಯುತ ರಾಜಕಾರಣಕ್ಕೆ ಮಂಡ್ಯ ಹೆಸರುವಾಸಿಯಾಗಿತ್ತು. ನನ್ನ ಅಧಿಕಾರವಧಿಯಲ್ಲಿ ಇಲ್ಲಿನ ಜನರು ಕೊಟ್ಟ ಪ್ರೀತಿ ಮತ್ತು ಸಹಕಾರಕ್ಕಾಗಿ ಆಭಾರಿಯಾಗಿದ್ದೇನೆ’ ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು.</p><p>ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಮಂಗಲ ಟಿ. ತಿಮ್ಮೇಗೌಡ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ‘ಟಿ.ತಿಮ್ಮೇಗೌಡ ಜನಮುಖಿ ಆಡಳಿತ ಪ್ರಶಸ್ತಿ’, ‘ಶ್ರೀಮತಿ ಲಿಂಗಮ್ಮ ದೊಡ್ಡಿ ತಿಮ್ಮೇಗೌಡ ಕೃಷಿಕ ಪ್ರಶಸ್ತಿ’ ಹಾಗೂ ‘ಶ್ರೀಮತಿ ಎಂ.ಆರ್. ಶಶಿಕಲಾ ಟಿ. ತಿಮ್ಮೇಗೌಡ ವಿದ್ಯಾರ್ಥಿ ಪುರಸ್ಕಾರ’ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.</p><p>ನನ್ನ 37 ವರ್ಷಗಳ ಸೇವಾವಧಿಯಲ್ಲಿ ಮಂಡ್ಯದ ಕೆಲಸ ಆತ್ಮತೃಪ್ತಿ ತಂದುಕೊಟ್ಟಿದೆ. ಇಲ್ಲಿನ ಜನರಿಂದ ಒಳ್ಳೆಯ ಕೆಲಸಗಳಿಗೆ ಸ್ಪಂದನೆ ಪ್ರೋತ್ಸಾಹ ಸಿಗುತ್ತದೆ. ಟಿ.ತಿಮ್ಮೇಗೌಡ ಅವರು ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದರ ಜೊತೆಗೆ ಮಂಗಲ ಗ್ರಾಮ ಅಭಿವೃದ್ಧಿಪಡಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ನಾನು ಗೌರವಿಸುವ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ಪ್ರಶಂಸಿದರು.</p><p>ಪ್ರತಿಷ್ಠಾನಗಳು ಬರೀ ಸಾಧಕರನ್ನು ಗೌರವಿಸುವ ಜೊತೆಗೆ ಇಲ್ಲಿನ ಯುವ ಜನತೆಗೆ ದೇಶ– ಹೊರದೇಶಗಳಲ್ಲಿ ಕೆಲಸ ಮಾಡಲು ಬೇಕಾದ ವೃತ್ತಿ ಕೌಶಲವನ್ನು ಕಲಿಸಬೇಕಾದ ಅಗತ್ಯತೆ ಇದೆ ಎಂದರು. </p><p>ಬೆಂಗಳೂರು ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ಡಾ.ಎಚ್.ಎಂ. ವೆಂಕಟಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಿ, ಟಿ.ತಿಮ್ಮೇಗೌಡರ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. </p><p>ಜನಪದ ಸಂಗೀತ ಗಾಯನ ಹಾಗೂ ಟಿ.ತಿಮ್ಮೇಗೌಡರು ನಡೆದು ಬಂದ ಜೀವನ ಹಾದಿಯ ಕುರಿತಾದ ಕಿರುಚಿತ್ರ ಪ್ರದರ್ಶಿಸಲಾಯಿತು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಎ.ಸಿ. ರಮೇಶ್ ವಹಿಸಿದ್ದರು.</p><p>ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೌಮ್ಯನಾಥ ಸ್ವಾಮೀಜಿ ಹಾಗೂ ಸತ್ಕೀರ್ತಿನಾಥ ಸ್ವಾಮೀಜಿ, ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಟಿ.ತಿಮ್ಮೇಗೌಡ, ತಿಮ್ಮೇಗೌಡರ ಪತ್ನಿ ಶಶಿಕಲಾ, ಪ್ರತಿಷ್ಠಾನದ ಪದಾಧಿಕಾರಿಗಳಾದ ಕೆ.ಎಂ. ಕೃಷ್ಣೇಗೌಡ ಕೀಲಾರ, ಟಿ.ಶಂಕರೇಗೌಡ, ಎಚ್.ಆರ್. ಕನ್ನಿಕಾ, ಶಿವಣ್ಣ ಮಂಗಲ, ಪ್ರಕಾಶ್, ದೇವರಾಜು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>