<p><strong>ಮಂಡ್ಯ</strong>: ‘ಮದ್ದೂರು ಶಾಸಕ ಕೆ.ಎಂ.ಉದಯ್ ಅವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಕಿರುವ ಸವಾಲನ್ನು ಸ್ವೀಕರಿಸಿ, ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ. ಡಿ.ಸಿ.ತಮ್ಮಣ್ಣ ಅವರ ಆಡಳಿತ ಅವಧಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. </p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮದ್ದೂರು ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಉದಯ್ ಕಳೆದ ಎರಡೂವರೆ ವರ್ಷದಲ್ಲಿ ₹1200 ರಿಂದ 1,500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಿದ್ದಾರೆ. ಆದರೆ ಉದಯ್ ಅವರು ತಂದಿರುವ ಯೋಜನೆಯನ್ನು ತಮ್ಮದೆಂದು ಡಿ.ಸಿ. ತಮ್ಮಣ್ಣ ಹೇಳಿಕೊಳ್ಳುತ್ತಿರುವುದು ಹ್ಯಾಸ್ಯಾಸ್ಪದ ಎಂದು ಕುಟುಕಿದರು. </p>.<p>ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ಕುಮಾರ್ ಮಾತನಾಡಿ, ‘ಕೆ.ಎಂ.ದೊಡ್ಡಿಯಿಂದ ಮದ್ದೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ₹10 ಕೋಟಿ ವೆಚ್ಚದ ಯೋಜನೆ 2021ರಲ್ಲಿ ಮಂಜೂರಾಗಿತ್ತು. ಆ ವೇಳೆ ರಸ್ತೆ ಮೇಲೆ ಪೈಪ್ ಹಾಕಿಸಿ ₹5 ಕೋಟಿಯನ್ನು ಗುತ್ತಿಗೆದಾರನ ಹೆಸರಲ್ಲಿ ಬಿಲ್ ಕೊಡಿಸಿದ್ದು, ಕಾಮಗಾರಿಯೇ ಆಗಿಲ್ಲ. ಜತೆಗೆ ಆ ಪೈಪ್ಗಳು ಕಳಪೆ ಎಂದು ತಂತ್ರಜ್ಞರು ವರದಿ ನೀಡಿದ್ದು, ಆ ಐದು ಕೋಟಿ ನಷ್ಟಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.</p>.<p>ಶಾಸಕ ಕೆ.ಎಂ. ಉದಯ್ ಬಗ್ಗೆ ಟೀಕಿಸಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ಗೆ ತಿರುಗೇಟು ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ‘ಟೋರಿನೋ ವ್ಯಾಪಾರ ಮಾಡುತ್ತಾ ಚನ್ನಪಟ್ಟಣದಿಂದ ಮಂಡ್ಯಕ್ಕೆ ಬಂದು ಹೆಸರು ವಾಸಿಯಾದರು. ಜೆಡಿಎಸ್ ವರಿಷ್ಠರಿಗೆ ಆ ಪಕ್ಷದ ನಾಯಕರ ಬಗ್ಗೆ ಚಾಡಿ ಮಾತುಗಳನ್ನೇ ಹೇಳುತ್ತಾ ಸ್ವಪಕ್ಷದವರ ಟೀಕೆಗೆ ಗುರಿಯಾಗುತ್ತಿರುವುದು ಗುಟ್ಟೇನಲ್ಲ. ಗಾಜಿನ ಮನೆಯೊಳಗೆ ವಾಸಿಸುತ್ತಾ ಬೇರೆಯವರ ಮನೆಗೆ ಕಲ್ಲೆಸೆದರೆ ಗತಿ ಏನಾಗುತ್ತದೆ ಎಂಬುದರ ಅರಿವಿರಲಿ’ ಎಂದು ಎಚ್ಚರಿಕೆ ನೀಡಿದರು.</p>.<p>ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ಬಾಬು, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ಇದ್ದರು. </p>.<div><blockquote>ಸೂಳೆಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಪ್ರತಿ ಲೋಡ್ ಮಣ್ಣಿಗೆ ₹4 ಸಾವಿರ ಪಡೆಯುತ್ತಿದ್ದಾರೆಂದು ಡಿ.ಸಿ. ತಮ್ಮಣ್ಣ ಆರೋಪಿಸಿದ್ದಾರೆ. ಆದರೆ ರೈತರಿಂದ ಒಂದು ರೂಪಾಯಿ ಕೂಡ ಪಡೆಯುತ್ತಿಲ್ಲ</blockquote><span class="attribution"> ಸಿ.ಡಿ.ಗಂಗಾಧರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ‘ಮದ್ದೂರು ಶಾಸಕ ಕೆ.ಎಂ.ಉದಯ್ ಅವರಿಗೆ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಕಿರುವ ಸವಾಲನ್ನು ಸ್ವೀಕರಿಸಿ, ಬಹಿರಂಗ ಚರ್ಚೆಗೆ ಸಿದ್ಧವಿದ್ದೇವೆ. ಡಿ.ಸಿ.ತಮ್ಮಣ್ಣ ಅವರ ಆಡಳಿತ ಅವಧಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ’ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. </p>.<p>ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮದ್ದೂರು ಕ್ಷೇತ್ರದಲ್ಲಿ ಶಾಸಕ ಕೆ.ಎಂ. ಉದಯ್ ಕಳೆದ ಎರಡೂವರೆ ವರ್ಷದಲ್ಲಿ ₹1200 ರಿಂದ 1,500 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿ ಅನುಷ್ಠಾನಗೊಳಿಸಿದ್ದಾರೆ. ಆದರೆ ಉದಯ್ ಅವರು ತಂದಿರುವ ಯೋಜನೆಯನ್ನು ತಮ್ಮದೆಂದು ಡಿ.ಸಿ. ತಮ್ಮಣ್ಣ ಹೇಳಿಕೊಳ್ಳುತ್ತಿರುವುದು ಹ್ಯಾಸ್ಯಾಸ್ಪದ ಎಂದು ಕುಟುಕಿದರು. </p>.<p>ಕಿಸಾನ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ದೇಶಹಳ್ಳಿ ಮೋಹನ್ಕುಮಾರ್ ಮಾತನಾಡಿ, ‘ಕೆ.ಎಂ.ದೊಡ್ಡಿಯಿಂದ ಮದ್ದೂರು ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ₹10 ಕೋಟಿ ವೆಚ್ಚದ ಯೋಜನೆ 2021ರಲ್ಲಿ ಮಂಜೂರಾಗಿತ್ತು. ಆ ವೇಳೆ ರಸ್ತೆ ಮೇಲೆ ಪೈಪ್ ಹಾಕಿಸಿ ₹5 ಕೋಟಿಯನ್ನು ಗುತ್ತಿಗೆದಾರನ ಹೆಸರಲ್ಲಿ ಬಿಲ್ ಕೊಡಿಸಿದ್ದು, ಕಾಮಗಾರಿಯೇ ಆಗಿಲ್ಲ. ಜತೆಗೆ ಆ ಪೈಪ್ಗಳು ಕಳಪೆ ಎಂದು ತಂತ್ರಜ್ಞರು ವರದಿ ನೀಡಿದ್ದು, ಆ ಐದು ಕೋಟಿ ನಷ್ಟಕ್ಕೆ ಯಾರು ಹೊಣೆ’ ಎಂದು ಪ್ರಶ್ನಿಸಿದರು.</p>.<p>ಶಾಸಕ ಕೆ.ಎಂ. ಉದಯ್ ಬಗ್ಗೆ ಟೀಕಿಸಿದ್ದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್ಗೆ ತಿರುಗೇಟು ನೀಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್, ‘ಟೋರಿನೋ ವ್ಯಾಪಾರ ಮಾಡುತ್ತಾ ಚನ್ನಪಟ್ಟಣದಿಂದ ಮಂಡ್ಯಕ್ಕೆ ಬಂದು ಹೆಸರು ವಾಸಿಯಾದರು. ಜೆಡಿಎಸ್ ವರಿಷ್ಠರಿಗೆ ಆ ಪಕ್ಷದ ನಾಯಕರ ಬಗ್ಗೆ ಚಾಡಿ ಮಾತುಗಳನ್ನೇ ಹೇಳುತ್ತಾ ಸ್ವಪಕ್ಷದವರ ಟೀಕೆಗೆ ಗುರಿಯಾಗುತ್ತಿರುವುದು ಗುಟ್ಟೇನಲ್ಲ. ಗಾಜಿನ ಮನೆಯೊಳಗೆ ವಾಸಿಸುತ್ತಾ ಬೇರೆಯವರ ಮನೆಗೆ ಕಲ್ಲೆಸೆದರೆ ಗತಿ ಏನಾಗುತ್ತದೆ ಎಂಬುದರ ಅರಿವಿರಲಿ’ ಎಂದು ಎಚ್ಚರಿಕೆ ನೀಡಿದರು.</p>.<p>ಜಿ.ಪಂ. ಮಾಜಿ ಸದಸ್ಯ ಎ.ಎಸ್. ರಾಜೀವ್, ಮನ್ಮುಲ್ ನಿರ್ದೇಶಕ ಹರೀಶ್ಬಾಬು, ಎಂ.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಚಲುವರಾಜು, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್ ಇದ್ದರು. </p>.<div><blockquote>ಸೂಳೆಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಪ್ರತಿ ಲೋಡ್ ಮಣ್ಣಿಗೆ ₹4 ಸಾವಿರ ಪಡೆಯುತ್ತಿದ್ದಾರೆಂದು ಡಿ.ಸಿ. ತಮ್ಮಣ್ಣ ಆರೋಪಿಸಿದ್ದಾರೆ. ಆದರೆ ರೈತರಿಂದ ಒಂದು ರೂಪಾಯಿ ಕೂಡ ಪಡೆಯುತ್ತಿಲ್ಲ</blockquote><span class="attribution"> ಸಿ.ಡಿ.ಗಂಗಾಧರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>