<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಮರಳಾಗಾಲದಲ್ಲಿ, ಮಳೆಗಾಗಿ ಪ್ರಾರ್ಥಿಸಿ ಬುಧವಾರ ಮಳೆರಾಯನ ಹಬ್ಬವನ್ನು ಆಚರಿಸಲಾಯಿತು.</p>.<p>ಗ್ರಾಮದ ಮಾರಿಗುಡಿ ಬಳಿ ಜೋಡಿ ಕಪ್ಪೆಗಳಿಗೆಮದುವೆ ಮಾಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಪ್ಪೆಗಳ ಜತೆಗೆ ಮಣ್ಣಿನಿಂದ ಮಾಡಿದ ಮಳೆ ದೇವತೆಗಳ ಮೆರವಣಿಗೆಯೂ ನಡೆಯಿತು.</p>.<p>ಮದನ್ ಎಂಬವರು ಜೋಡಿ ಕಪ್ಪೆಗಳನ್ನು ಹಾಗೂ ಶಿವಲಿಂಗು ಅವರು ಮಳೆ ದೇವತೆಯ ಮೂರ್ತಿಗಳನ್ನು ಹೊತ್ತು ಹೆಜ್ಜೆ ಹಾಕಿದರು. ಪ್ರತಿ ಮನೆಗಳ ಮುಂದೆ ಜೋಡಿ ಕಪ್ಪೆಗಳು ಮತ್ತು ಮಳೆ ದೇವತೆಯ ಮೂರ್ತಿಗೆ ಬಿಂದಿಗೆಗಳಲ್ಲಿ ನೀರು ಸುರಿಯಲಾಯಿತು.</p>.<p>ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾಂತರಾಜು, ಯೋಗೇಶ್, ಮಂಜು ನಾಥ್, ರಮೇಶ್, ರಾಮಚಂದ್ರು, ಭಾರ್ಗವ, ವಿಜಯಕುಮಾರ್, ಲೋಕೇಶ್, ರವಿ, ಪಾಂಡು, ಬಾಲರಾಜು ಇತರರು ‘ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ...’ ಎಂದು ಕೂಗುತ್ತಾ ಸಾಗಿದರು.</p>.<p>ಸುಮಾರು ಮೂರು ತಾಸು ನಡೆದ ಮೆರವಣಿಗೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾಪ್ತಿಯಾಯಿತು. ದೇವಾಲಯದ ಆವರಣದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-40-1738633457</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಂಗಪಟ್ಟಣ:</strong> ತಾಲ್ಲೂಕಿನ ಮರಳಾಗಾಲದಲ್ಲಿ, ಮಳೆಗಾಗಿ ಪ್ರಾರ್ಥಿಸಿ ಬುಧವಾರ ಮಳೆರಾಯನ ಹಬ್ಬವನ್ನು ಆಚರಿಸಲಾಯಿತು.</p>.<p>ಗ್ರಾಮದ ಮಾರಿಗುಡಿ ಬಳಿ ಜೋಡಿ ಕಪ್ಪೆಗಳಿಗೆಮದುವೆ ಮಾಡಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಕಪ್ಪೆಗಳ ಜತೆಗೆ ಮಣ್ಣಿನಿಂದ ಮಾಡಿದ ಮಳೆ ದೇವತೆಗಳ ಮೆರವಣಿಗೆಯೂ ನಡೆಯಿತು.</p>.<p>ಮದನ್ ಎಂಬವರು ಜೋಡಿ ಕಪ್ಪೆಗಳನ್ನು ಹಾಗೂ ಶಿವಲಿಂಗು ಅವರು ಮಳೆ ದೇವತೆಯ ಮೂರ್ತಿಗಳನ್ನು ಹೊತ್ತು ಹೆಜ್ಜೆ ಹಾಕಿದರು. ಪ್ರತಿ ಮನೆಗಳ ಮುಂದೆ ಜೋಡಿ ಕಪ್ಪೆಗಳು ಮತ್ತು ಮಳೆ ದೇವತೆಯ ಮೂರ್ತಿಗೆ ಬಿಂದಿಗೆಗಳಲ್ಲಿ ನೀರು ಸುರಿಯಲಾಯಿತು.</p>.<p>ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾಂತರಾಜು, ಯೋಗೇಶ್, ಮಂಜು ನಾಥ್, ರಮೇಶ್, ರಾಮಚಂದ್ರು, ಭಾರ್ಗವ, ವಿಜಯಕುಮಾರ್, ಲೋಕೇಶ್, ರವಿ, ಪಾಂಡು, ಬಾಲರಾಜು ಇತರರು ‘ಉಯ್ಯೋ ಉಯ್ಯೋ ಮಳೆರಾಯ, ಹೂವಿನ ತೋಟಕ್ಕೆ ನೀರಿಲ್ಲ...’ ಎಂದು ಕೂಗುತ್ತಾ ಸಾಗಿದರು.</p>.<p>ಸುಮಾರು ಮೂರು ತಾಸು ನಡೆದ ಮೆರವಣಿಗೆ ಆಂಜನೇಯಸ್ವಾಮಿ ದೇವಾಲಯದ ಬಳಿ ಸಮಾಪ್ತಿಯಾಯಿತು. ದೇವಾಲಯದ ಆವರಣದಲ್ಲಿ ಸಾಮೂಹಿಕ ಅನ್ನ ಸಂತರ್ಪಣೆ ನಡೆಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-40-1738633457</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>