ಮಂಗಳೂರು ಮೂಲದ ಡಾ.ಕೃಷ್ಣಮೂರ್ತಿ ತೊರೆಕಾಡನಹಳ್ಳಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಆರ್ಎಂಪಿ ವೈದ್ಯರಾಗಿ ಕ್ಲಿನಿಕ್ ನಡೆಸುತ್ತಿದ್ದಾರೆ. ಜ್ವರದಿಂದ ಬಳಲುತ್ತಿದ್ದ ಶಿವಲಿಂಗೇಗೌಡ ಕಳೆದ ಭಾನುವಾರ ಕೃಷ್ಣಮೂರ್ತಿ ಅವರಿಗೆ ತೋರಿಸಿದ್ದಾರೆ. ವೈದ್ಯರು ರೋಗಿಗೆ ಚುಚ್ಚುಮದ್ದು ನಿಡಿದ್ದಾರೆ. ಚುಚ್ಚುಮದ್ದು ನೀಡಿದ ಸ್ಥಳದಲಿ ಊತ ಆಗಿ ನೋವು ಕಾಣಿಸಿಕೊಂಡಿದೆ. ಸೋಮವಾರ ಪುನಃ ಕ್ಲಿನಿಕ್ಗೆ ತೆರಳಿದ್ದಾರೆ, ಊತದಿಂದ ಏನೂ ಆಗುವುದಿಲ್ಲ, ಮುಲಾಮು ಹಚ್ಚಿಕೊಳ್ಳುವಂತೆ ಹೇಳಿ ಕಳುಹಿಸಿದ್ದಾರೆ.