ಕೊಂಡೋತ್ಸವಕ್ಕಾಗಿ ದೇವಾಲ ಯದ ಮುಂದೆ ಬೆಂಕಿಯ ಕೊಂಡವನ್ನು ಸಿದ್ಧಪಡಿಸಲಾಗಿತ್ತು. ಕರಗವನ್ನು ಹೊತ್ತಿದ್ದ ಮುತ್ತುಲಕ್ಷ್ಮಿ ಮಾರಮ್ಮನ ಗುಡ್ಡಪ್ಪ ಬಿ. ಕುಮಾರ್ ಕೊಂಡವನ್ನು ಹಾಯ್ದರು. ಕೊಂಡ ಹಾಯುವ ವೇಳೆ ಮುತ್ತುಲಕ್ಷ್ಮಿ ಮಾರಮ್ಮ ದೇವಿಯ ಪರ ಘೋಷಣೆಗಳು ಮೊಳಗಿದವು. ದೇವಾಲಯದಲ್ಲಿ ಕ್ಷೀರಾಭಿಷೇಕ, ಅರ್ಚನೆಗಳು ನಡೆದವು.