<p><strong>ಮೇಲುಕೋಟೆ (ಮಂಡ್ಯ ಜಿಲ್ಲೆ):</strong> ಇಲ್ಲಿನ ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಚೆಲುವನಾರಾಯಣ ಸ್ವಾಮಿ ಹಾಗೂ ಕಲ್ಯಾಣಿ ನಾಯಕಿ ಅಮ್ಮನವರ ಕಲ್ಯಾಣೋತ್ಸವ ಪಂಚ ಕಲ್ಯಾಣಿಯ ಧಾರಾ ಮಂಟಪದಲ್ಲಿ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು.</p><p>ಮಂಟಪವನ್ನು ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಧಾರ್ಮಿಕ ಸಮನ್ಮಾಲೆ, ಲಾಜಹೋಮದ ಉತ್ಸವದ ಬಳಿಕ ಮಾಂಗಲ್ಯ ಧಾರಣೆ ಜರುಗಿತು. ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.</p><p>ವಿಶೇಷ ಪುಷ್ಪಗಳಿಂದ ಅಲಂಕೃತಗೊಂಡ ಚೆಲುವನಾರಾಯಣ ಸ್ವಾಮಿ ಹಾಗೂ ದೇವಿಯ ಉತ್ಸವ ಗೋಷ್ಠಿಯು ದೇವಾಲಯದಿಂದ ಸಪ್ತ ನಾದಸ್ವರದೊಂದಿಗೆ ತೆರಳಿ ರಾಜಬೀದಿಯ ಮೂಲಕ ಪಂಚಕಲ್ಯಾಣಿಯನ್ನು ತಲುಪಿತು. ಕಲ್ಯಾಣೋತ್ಸವ ಬಳಿಕ ರಾತ್ರಿ 9ರ ಉತ್ಸವ ಮರಳಿ ದೇವಾಲಯ ತಲುಪಿತು.</p><p>ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಕನ್ನಗೊನಹಳ್ಳಿ ಪರಮೇಶ್ ಗೌಡ, ವೆಂಕಟರಾಮೇಗೌಡ, ಪುಟ್ಟಸ್ವಾಮಿ ಕೆ, ರಾಜು, ವೆಂಕಟೇಶ್, ಪ್ರೀತಿ ಮಹದೇವ್, ಸತೀಶ್, ಶೋಭಾ, ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಪಾಲ್ಗೊಂಡಿದರು.</p><p><strong>ಕಲಾತಂಡಗಳ ಮೆರುಗು:</strong></p><p>‘ಏ.1ರಂದು ನಡೆಯುವ ಚೆಲುವನಾರಾಯಣ ಸ್ವಾಮಿಯ ತೆಪ್ಪೋತ್ಸವದಂದು ಕಲ್ಯಾಣಿಯ ಮೂರು ದಿಕ್ಕಿನಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ಕೇರಳದ ಚಂಡೆಮೇಳ, ಪಂಚನಾದಸ್ವರ, ಭುವನೇಶ್ವರಿ ಮಂಟಪದಲ್ಲಿ ಭರತನಾಟ್ಯ ಆಯೋಜನೆ ಮಾಡಲಾಗುವುದು’ ಎಂದು ಕನಗೋನಹಳ್ಳಿ ಪರಮೇಶಗೌಡ ಹೇಳಿದರು.</p><p><strong>ಬ್ರಹ್ಮೋತ್ಸವದಲ್ಲಿ ಇಂದು:</strong></p><p>ಜಾತ್ರಾ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ನಿತ್ಯ ಭೇರಿತಾಡನ, ಹಂಸವಾಹನ, ಯಾಗಶಾಲಾ ಪ್ರವೇಶ ಪೂಜಾ ಕೈಂಕರ್ಯಗಳು ನಡೆಯಲಿದೆ. 26ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ, ಶೇಷವಾಹನೋತ್ಸವ ನೆರವೇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೇಲುಕೋಟೆ (ಮಂಡ್ಯ ಜಿಲ್ಲೆ):</strong> ಇಲ್ಲಿನ ವೈರಮುಡಿ ಬ್ರಹ್ಮೋತ್ಸವ ಅಂಗವಾಗಿ ಚೆಲುವನಾರಾಯಣ ಸ್ವಾಮಿ ಹಾಗೂ ಕಲ್ಯಾಣಿ ನಾಯಕಿ ಅಮ್ಮನವರ ಕಲ್ಯಾಣೋತ್ಸವ ಪಂಚ ಕಲ್ಯಾಣಿಯ ಧಾರಾ ಮಂಟಪದಲ್ಲಿ ಮಂಗಳವಾರ ರಾತ್ರಿ ವೈಭವದಿಂದ ನೆರವೇರಿತು.</p><p>ಮಂಟಪವನ್ನು ವಿವಿಧ ಬಗೆಯ ಪುಷ್ಪಗಳು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಧಾರ್ಮಿಕ ಸಮನ್ಮಾಲೆ, ಲಾಜಹೋಮದ ಉತ್ಸವದ ಬಳಿಕ ಮಾಂಗಲ್ಯ ಧಾರಣೆ ಜರುಗಿತು. ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ಭಕ್ತಸಾಗರವೇ ಹರಿದು ಬಂದಿತ್ತು.</p><p>ವಿಶೇಷ ಪುಷ್ಪಗಳಿಂದ ಅಲಂಕೃತಗೊಂಡ ಚೆಲುವನಾರಾಯಣ ಸ್ವಾಮಿ ಹಾಗೂ ದೇವಿಯ ಉತ್ಸವ ಗೋಷ್ಠಿಯು ದೇವಾಲಯದಿಂದ ಸಪ್ತ ನಾದಸ್ವರದೊಂದಿಗೆ ತೆರಳಿ ರಾಜಬೀದಿಯ ಮೂಲಕ ಪಂಚಕಲ್ಯಾಣಿಯನ್ನು ತಲುಪಿತು. ಕಲ್ಯಾಣೋತ್ಸವ ಬಳಿಕ ರಾತ್ರಿ 9ರ ಉತ್ಸವ ಮರಳಿ ದೇವಾಲಯ ತಲುಪಿತು.</p><p>ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಕನ್ನಗೊನಹಳ್ಳಿ ಪರಮೇಶ್ ಗೌಡ, ವೆಂಕಟರಾಮೇಗೌಡ, ಪುಟ್ಟಸ್ವಾಮಿ ಕೆ, ರಾಜು, ವೆಂಕಟೇಶ್, ಪ್ರೀತಿ ಮಹದೇವ್, ಸತೀಶ್, ಶೋಭಾ, ಕಾರ್ಯನಿರ್ವಾಹಕ ಅಧಿಕಾರಿ ಶೀಲಾ ಪಾಲ್ಗೊಂಡಿದರು.</p><p><strong>ಕಲಾತಂಡಗಳ ಮೆರುಗು:</strong></p><p>‘ಏ.1ರಂದು ನಡೆಯುವ ಚೆಲುವನಾರಾಯಣ ಸ್ವಾಮಿಯ ತೆಪ್ಪೋತ್ಸವದಂದು ಕಲ್ಯಾಣಿಯ ಮೂರು ದಿಕ್ಕಿನಲ್ಲಿ ತಾತ್ಕಾಲಿಕ ವೇದಿಕೆ ನಿರ್ಮಿಸಿ ಕೇರಳದ ಚಂಡೆಮೇಳ, ಪಂಚನಾದಸ್ವರ, ಭುವನೇಶ್ವರಿ ಮಂಟಪದಲ್ಲಿ ಭರತನಾಟ್ಯ ಆಯೋಜನೆ ಮಾಡಲಾಗುವುದು’ ಎಂದು ಕನಗೋನಹಳ್ಳಿ ಪರಮೇಶಗೌಡ ಹೇಳಿದರು.</p><p><strong>ಬ್ರಹ್ಮೋತ್ಸವದಲ್ಲಿ ಇಂದು:</strong></p><p>ಜಾತ್ರಾ ಮಹೋತ್ಸವ ಅಂಗವಾಗಿ ಧ್ವಜಾರೋಹಣ ಬೆಳಗ್ಗೆ 9 ಗಂಟೆಗೆ ನೆರವೇರಲಿದೆ. ನಿತ್ಯ ಭೇರಿತಾಡನ, ಹಂಸವಾಹನ, ಯಾಗಶಾಲಾ ಪ್ರವೇಶ ಪೂಜಾ ಕೈಂಕರ್ಯಗಳು ನಡೆಯಲಿದೆ. 26ರಂದು ರಾಮಾನುಜಾಚಾರ್ಯರಿಗೆ ಅಭಿಷೇಕ, ಶೇಷವಾಹನೋತ್ಸವ ನೆರವೇರಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>