ಮೇಲುಕೋಟೆಯ ವೈರಮುಡಿ ಉತ್ಸವಕ್ಕೆ ಪ್ರತಿವರ್ಷ ಹಲವು ದಾನಿಗಳು ಸ್ಪಾನ್ಸರ್ ಮಾಡತ್ತಿದ್ದರು. ಈ ಬಾರಿ ಸ್ಪಾನ್ಸರ್ ಗಳ ಸಂಖ್ಯೆ ಹೆಚ್ಚಾಗಿದೆ. ಪ್ರತಿವರ್ಷದಂತೆ ಉತ್ಸವಕ್ಕೆ ಸಕಲ ಸಿದ್ಧತೆ ಕೈಗೊಂಡಿದ್ದೇವೆ ಎಂದು ದೇವಾಲಯ ಆಡಳಿತಾಧಿಕಾರಿ ಶೀಲಾ ತಿಳಿಸಿದರು. ವೈರಮುಡಿ ಉತ್ಸವದ ಅಂಗವಾಗಿ ಅಂಕುರಾರ್ಪಣ ಕಲ್ಯಾಣೋತ್ಸವ ಧಾರಾಮಹೋತ್ಸವ ಧ್ವಜರೋಹಣ ರಾಮಾನುಜಾಚಾರ್ಯರಿಗೆ ಅಭಿಷೇಕ ನಾಗವಲ್ಲಿ ಮಹೋತ್ಸವ ವೈರಮುಡಿ ಕಿರೀಟಧಾರಣೆ ಪ್ರಹ್ಲಾದ ಪರಿಪಾಲನ ಗಜೇಂದ್ರ ಮೋಕ್ಷ ರಥೋತ್ಸವ ತೆಪ್ಪೊತ್ಸವ ಚೂರ್ಣಭಿಷೇಕ ನಾರಾಯಣ ಸ್ವಾಮಿಗೆ ಅಭಿಷೇಕ ಸೇರಿದಂತೆ ವಿವಿಧ ಉತ್ಸವಗಳಿಗೆ ವಿವಿಧ ಮಠಗಳು ಹಾಗೂ ದೇವಾಲಯ ಭಕ್ತರು ಸ್ಪಾನ್ಸರ್ ನೀಡಿದ್ದಾರೆ.