ಮನ್ಮುಲ್ ಹಾಲು ಉತ್ಪಾದಕರ ಅವಿರತ ಶ್ರಮದಿಂದ ನಡೆಯುತ್ತಿದ್ದು, ಅದರಿಂದ ಬಂದಿರುವ ಲಾಭ ಉತ್ಪಾದಕನಿಗೆ ಸೇರದೆ ಒಕ್ಕೂಟದ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಜೇಬಿಗೆ ಸೇರುತ್ತಿದೆ. ಹಾಲಿನ ದರ ಹೆಚ್ಚಳ ಮಾಡುವ ಸಂದರ್ಭದಲ್ಲಿ ಪತ್ರಿಕಾ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಒಕ್ಕೂಟ, ದರ ಕಡಿಮೆ ಮಾಡುವಾಗ ಯಾವುದೇ ಮುನ್ಸೂಚನೆ ನೀಡದೆ ಏಪ್ರಿಲ್ನಿಂದ ಜುಲೈ 10 ರವರೆಗೆ ₹6 ಕಡಿತಗೊಳಿಸಿದ್ದಾರೆ ಎಂದು ಸಮಿತಿ ಅಧ್ಯಕ್ಷ ಎಸ್.ಸಿ.ಮಧುಚಂದನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.