‘ನ.12ರಂದು ಸಂಜೆ 6 ಗಂಟೆ ಸುಮಾರಿಗೆ ನನ್ನ ಸಂಬಂಧಿ ಶರತ್ ಎಂಬವರ ಜತೆ ಕುಶಾಲನಗರದಿಂದ ಬೆಳಗೊಳಕ್ಕೆ ಬೈಕ್ನಲ್ಲಿ ಬಂದು ಅಲ್ಲಿಂದ ಬಲಮುರಿಗೆ ಒಬ್ಬನೇ ಹೋಗುತ್ತಿದ್ದೆ. ಈ ವೇಳೆ ಎರಡು ಬೈಕ್ಗಳಲ್ಲಿ ಬಂದ ನಾಲ್ವರು ಹುಡುಗರು, ದೃಶ್ಯಾ ಅವರ ಬಳಿ ಹಣ ಕೇಳುತ್ತೀಯಾ ಎಂದು ರೇಜರ್ ಬ್ಲೇಡ್ನಿಂದ ಬಲ ತೋಳು, ಬಲ ಎದೆ, ಎಡ ಕೈ, ಎಡ ಎದೆಗೆ ಗಾಯ ಮಾಡಿದರು. ಕೆಳಕ್ಕೆ ಕೆಡವಿ, ಬೇಸ್ ಬ್ಯಾಟ್ನಿಂದ ಬಲ ಹೊಟ್ಟೆ ಮತ್ತು ಎದೆ ಮೇಲೆ ಗುದ್ದಿದರು. ಅವರ ಬಳಿ ಲಾಂಗ್ ಕೂಡ ಇತ್ತು. ಯಾರೋ ನನ್ನನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ಸೇರಿಸಿದರು’ ಎಂದು ರಾಜೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ
ತಿಳಿಸಿದ್ದಾರೆ.