<p><strong>ಮಂಡ್ಯ:</strong> ಜಿಲ್ಲೆಯ ನಾಗಮಂಗಲದಲ್ಲಿ ಸರ್ಕಾರಿ ಭೂಮಿ ಕಬಳಿಕೆಯ ಪ್ರಮಾಣ 320 ಎಕರೆಯಿಂದ 1 ಸಾವಿರ ಎಕರೆಗೆ ಏರಿಕೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಡಿವೈಎಸ್ಪಿಗೆ ನೀಡಿದ್ದ ತನಿಖೆಯ ಹೊಣೆಯನ್ನು ಈಗ ಹೆಚ್ಚುವರಿ ಎಸ್ಪಿಗೆ ವರ್ಗಾಯಿಸಲಾಗಿದೆ.</p>. <p>ನಾಗಮಂಗಲ ಡಿವೈಎಸ್ಪಿ ಚಲುವರಾಜು ನೇತೃತ್ವದಲ್ಲಿ ತಂಡ ರಚಿಸಿ, ಜ. 15ರಂದು ತನಿಖೆಗೆ ಒಪ್ಪಿಸಲಾಗಿತ್ತು. 4 ತಿಂಗಳಾದರೂ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ ಎಸ್ಪಿ ಶೋಭಾರಾಣಿ ಅವರಿಗೆ ಈಚೆಗೆ ತಾಕೀತು ಮಾಡಿದ್ದರು.</p>. <p>‘ಪ್ರಕರಣ ಗಂಭೀರವಾಗಿದ್ದು, ಸಿಐಡಿಗೆ ವಹಿಸಬೇಕು’ ಎಂದು ಎಸ್ಪಿಗೆ ತನಿಖಾಧಿಕಾರಿಯೂ ಪತ್ರ ಬರೆದಿದ್ದರು. ಈಗ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಮಂಡ್ಯದ ಹೆಚ್ಚುವರಿ ಎಸ್ಪಿ (ಕಾನೂನು ಮತ್ತು ಸುವ್ಯವಸ್ಥೆ) ತಿಮ್ಮಯ್ಯ ಅವರಿಗೆ ತನಿಖೆ ಹೊಣೆ ವಹಿಸಿ ಆದೇಶಿಸಿದ್ದಾರೆ. </p> .<h2>ಏನಿದು ಪ್ರಕರಣ: </h2>.<p>ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು ಮಾಡಿ, ಅಧಿಕಾರ ದುರ್ಬಳಕೆ ಮಾಡಿಕೊಂಡ ಬಗ್ಗೆ ಸಾರ್ವಜನಿಕರ ದೂರುಗಳನ್ನು ಆಧರಿಸಿ ಮಂಡ್ಯ ಲೋಕಾಯುಕ್ತ ಪೊಲೀಸರು ಜ.13ರಂದು, ನಾಗಮಂಗಲ ತಾಲ್ಲೂಕು ಕಚೇರಿ, ಆರೋಪಿತ ನೌಕರರ ಮನೆಗಳು, ಜೆರಾಕ್ಸ್ ಸೆಂಟರ್, ಮೈಸೂರಿನ ಅಗ್ರಹಾರದ ‘ಹೋಟೆಲ್ ರಾಜರತ್ನ’ ಸೇರಿ ಏಳು ಕಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರು. </p>.<p>ಇಬ್ಬರು ಶಿರಸ್ತೇದಾರರು, ನಾಲ್ವರು ದ್ವಿತೀಯದರ್ಜೆ ಸಹಾಯಕರು ಸೇರಿ 10 ಆರೋಪಿಗಳ ವಿರುದ್ಧ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 7 ಆರೋಪಿಗಳನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. </p>.<p>ಪ್ರಕರಣದ ಸಂಬಂಧ ಸುಮಾರು 700 ಮಂದಿಗೆ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದು, 70ಕ್ಕೂ ಹೆಚ್ಚು ಮಂದಿಗೆ ನೋಟಿಸ್ ವಿತರಣೆಯಾಗಿದೆ. </p>.<div><blockquote>6 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಎಎಸ್ಪಿ ಅವರಿಗೆ ಗಡುವು ನೀಡಲಾಗಿದೆ. ನಾವೂ ನಿರಂತರ ನಿಗಾ ಇಟ್ಟಿದ್ದೇವೆ. ವರದಿ ಸರಿಯಾಗಿ ಕೊಡದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ</blockquote><span class="attribution">ಬಿ.ವೀರಪ್ಪ ಉಪ ಲೋಕಾಯುಕ್ತ–2</span></div>.<div><blockquote>ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕೀಯ ಮುಖಂಡರ ಕೈವಾಡ ಇರುವುದರಿಂದ ಪ್ರಕರಣವನ್ನು ‘ಎಸ್ಐಟಿ’ಗೆ ವಹಿಸಬೇಕು. ಈ ದೊಡ್ಡ ಹಗರಣವನ್ನು ಪೊಲೀಸರು ಭೇದಿಸುವುದು ಕಷ್ಟ</blockquote><span class="attribution">ಕೆ.ಆರ್.ರವೀಂದ್ರ ಸಾಮಾಜಿಕ ಕಾರ್ಯಕರ್ತ ಮಂಡ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಜಿಲ್ಲೆಯ ನಾಗಮಂಗಲದಲ್ಲಿ ಸರ್ಕಾರಿ ಭೂಮಿ ಕಬಳಿಕೆಯ ಪ್ರಮಾಣ 320 ಎಕರೆಯಿಂದ 1 ಸಾವಿರ ಎಕರೆಗೆ ಏರಿಕೆಯಾಗಿದ್ದು, ಪ್ರಕರಣ ಗಂಭೀರ ಸ್ವರೂಪ ಪಡೆದಿದೆ. ಡಿವೈಎಸ್ಪಿಗೆ ನೀಡಿದ್ದ ತನಿಖೆಯ ಹೊಣೆಯನ್ನು ಈಗ ಹೆಚ್ಚುವರಿ ಎಸ್ಪಿಗೆ ವರ್ಗಾಯಿಸಲಾಗಿದೆ.</p>. <p>ನಾಗಮಂಗಲ ಡಿವೈಎಸ್ಪಿ ಚಲುವರಾಜು ನೇತೃತ್ವದಲ್ಲಿ ತಂಡ ರಚಿಸಿ, ಜ. 15ರಂದು ತನಿಖೆಗೆ ಒಪ್ಪಿಸಲಾಗಿತ್ತು. 4 ತಿಂಗಳಾದರೂ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ತನಿಖೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಅವರು ಮಂಡ್ಯ ಎಸ್ಪಿ ಶೋಭಾರಾಣಿ ಅವರಿಗೆ ಈಚೆಗೆ ತಾಕೀತು ಮಾಡಿದ್ದರು.</p>. <p>‘ಪ್ರಕರಣ ಗಂಭೀರವಾಗಿದ್ದು, ಸಿಐಡಿಗೆ ವಹಿಸಬೇಕು’ ಎಂದು ಎಸ್ಪಿಗೆ ತನಿಖಾಧಿಕಾರಿಯೂ ಪತ್ರ ಬರೆದಿದ್ದರು. ಈಗ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಮಂಡ್ಯದ ಹೆಚ್ಚುವರಿ ಎಸ್ಪಿ (ಕಾನೂನು ಮತ್ತು ಸುವ್ಯವಸ್ಥೆ) ತಿಮ್ಮಯ್ಯ ಅವರಿಗೆ ತನಿಖೆ ಹೊಣೆ ವಹಿಸಿ ಆದೇಶಿಸಿದ್ದಾರೆ. </p> .<h2>ಏನಿದು ಪ್ರಕರಣ: </h2>.<p>ಸರ್ಕಾರಿ ಜಮೀನು ಅಕ್ರಮವಾಗಿ ಮಂಜೂರು ಮಾಡಿ, ಅಧಿಕಾರ ದುರ್ಬಳಕೆ ಮಾಡಿಕೊಂಡ ಬಗ್ಗೆ ಸಾರ್ವಜನಿಕರ ದೂರುಗಳನ್ನು ಆಧರಿಸಿ ಮಂಡ್ಯ ಲೋಕಾಯುಕ್ತ ಪೊಲೀಸರು ಜ.13ರಂದು, ನಾಗಮಂಗಲ ತಾಲ್ಲೂಕು ಕಚೇರಿ, ಆರೋಪಿತ ನೌಕರರ ಮನೆಗಳು, ಜೆರಾಕ್ಸ್ ಸೆಂಟರ್, ಮೈಸೂರಿನ ಅಗ್ರಹಾರದ ‘ಹೋಟೆಲ್ ರಾಜರತ್ನ’ ಸೇರಿ ಏಳು ಕಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರು. </p>.<p>ಇಬ್ಬರು ಶಿರಸ್ತೇದಾರರು, ನಾಲ್ವರು ದ್ವಿತೀಯದರ್ಜೆ ಸಹಾಯಕರು ಸೇರಿ 10 ಆರೋಪಿಗಳ ವಿರುದ್ಧ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 7 ಆರೋಪಿಗಳನ್ನು ಬಂಧಿಸಿ, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಬಂದಿದ್ದಾರೆ. </p>.<p>ಪ್ರಕರಣದ ಸಂಬಂಧ ಸುಮಾರು 700 ಮಂದಿಗೆ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಂಡಿದ್ದು, 70ಕ್ಕೂ ಹೆಚ್ಚು ಮಂದಿಗೆ ನೋಟಿಸ್ ವಿತರಣೆಯಾಗಿದೆ. </p>.<div><blockquote>6 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಎಎಸ್ಪಿ ಅವರಿಗೆ ಗಡುವು ನೀಡಲಾಗಿದೆ. ನಾವೂ ನಿರಂತರ ನಿಗಾ ಇಟ್ಟಿದ್ದೇವೆ. ವರದಿ ಸರಿಯಾಗಿ ಕೊಡದಿದ್ದರೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ</blockquote><span class="attribution">ಬಿ.ವೀರಪ್ಪ ಉಪ ಲೋಕಾಯುಕ್ತ–2</span></div>.<div><blockquote>ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕೀಯ ಮುಖಂಡರ ಕೈವಾಡ ಇರುವುದರಿಂದ ಪ್ರಕರಣವನ್ನು ‘ಎಸ್ಐಟಿ’ಗೆ ವಹಿಸಬೇಕು. ಈ ದೊಡ್ಡ ಹಗರಣವನ್ನು ಪೊಲೀಸರು ಭೇದಿಸುವುದು ಕಷ್ಟ</blockquote><span class="attribution">ಕೆ.ಆರ್.ರವೀಂದ್ರ ಸಾಮಾಜಿಕ ಕಾರ್ಯಕರ್ತ ಮಂಡ್ಯ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>