ನಾಗಮಂಗಲ: ಪ್ರಗತಿ ಪರಿಶೀಲನಾ ಸಭೆಗೆ ಕೆಆರ್ಐಡಿಎಲ್ ಎಂಜಿನಿಯರ್ ಭಾಗವಹಿಸದೆ ಕಚೇರಿ ಸಿಬ್ಬಂದಿಯನ್ನು ಸಭೆಗೆ ಕಳುಹಿಸಿದ್ದಕ್ಕಾಗಿ ಆಡಳಿತಾಧಿಕಾರಿ ಧನಂಜಯ ಆಕ್ರೋಶ ವ್ಯಕ್ತಪಡಿಸಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ಶುಕ್ರವಾರ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆಗಳ ಮಾಹಿತಿ ಪಡೆಯುವಾಗ ಕೆಆರ್ಐಡಿಎಲ್ ಎಂಜಿನಿಯರ್ ಹಾಜರಿರಲಿಲ್ಲ, ಸಿಬ್ಬಂದಿಯನ್ನು ಕಳಿಸಿದ್ದರು. ಎಂಜಿನಿಯರ್ ಬೇರೆ ಸಭೆಗೆ ಹೋಗಿದ್ದಾರೆ ಎಂದು ಸಿಬ್ಬಂದಿಯು ಪ್ರತಿಕ್ರಿಯಿಸಿದರು. ‘ಎಂಜಿನಿಯರ್ ಸಭೆಗೆ ಬರುವಂತೆ ನೋಟಿಸ್ ನೀಡಿದ್ದರೂ ಹಾಜರಾಗದೆ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.ನೀವು ಮಾಹಿತಿ ನೀಡುವ ಅಗತ್ಯವಿಲ್ಲ ’ ಎಂದು ತರಾಟೆ ತೆಗೆದುಕೊಂಡರು.
ಸಿಡಿಪಿಒ ಕೃಷ್ಣಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ನೋಂದಣಿ ಮಾಡರುವವರಿಗೆ ಈಗಾಗಲೇ ಎರಡು ಕಂತು ಹಣ ಖಾತೆಗೆ ಜಮಾ ಆಗಿದೆ. 2,650 ಫಲಾನುಭವಿಗಳಿಗೆ ನೋಂದಣಿಯಲ್ಲಿ ತಾಂತ್ರಿಕ ದೋಷದಿಂದ ಹಣ ಜಮಾ ಆಗಿಲ್ಲ. ತಾಲ್ಲೂಕಿನಲ್ಲಿ ಶೇ 90 ರಷ್ಟು ಫಲಾನುಭವಿಗಳಿಗೆ ಹಣ ಜಮೆಯಾಗಿದ್ದು, ಹಣ ಜಮೆಯಾಗದರ ಮನೆಗೆ ತೆರಳಿ ಸಮಸ್ಯೆ ಪರಿಹರಿಸಲಾಗುತ್ತಿದೆ ಎಂದರು.
ತೋಟಗಾರಿಕೆ, ಆರೋಗ್ಯ, ಆಯುಷ್ ಇಲಾಖೆ, ಅರಣ್ಯ, ಪಂಚಾಯತ್ ರಾಜ್ ಇಲಾಖೆ, ಪಶು ಸಂಗೋಪನೆ, ಲೋಕೋಪಯೋಗಿ , ಸಾಮಾಜಿಕ ಅರಣ್ಯ ಸಮಾಜ ಕಲ್ಯಾಣ, ರೇಷ್ಮೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.
ಇಒ ಚಂದ್ರಮೌಳಿ, ಅಧಿಕಾರಿಗಳಾದ ಕುಮಾರ್, ಪ್ರಸನ್ನ, ಯುವರಾಜು, ರಮೇಶ್,ಮಂಜುನಾಥ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.